ಅಕ್ರಮ ಗಣಿಗಾರಿಕೆ ಆರೋಪ: ತೆಲಂಗಾಣ ಸಚಿವ ಗಂಗುಲಾ ಮೇಲೆ ಈ.ಡಿ.ದಾಳಿ

Update: 2022-11-09 17:28 GMT

ಹೈೈದರಾಬಾದ್, ನ.9: ಅಕ್ರಮ ಗಣಿಗಾರಿಕೆ ಹಾಗೂ ಕಪ್ಪುಹಣ ಬಿಳುಪು ಪ್ರಕರಣಕ್ಕೆ ಸಂಬಂಧಿಸಿ  ಜಾರಿನಿರ್ದೇಶನಾಲಯದ ಅಧಿಕಾರಿಗಳು ಬುಧವಾರ  ತೆಲಂಗಾಣದ  ಸಚಿವ ಗಂಗುಲಾ ಕಮಲಾಕರ್ ಅವರಿಗೆ ಸೇರಿದ ಆಸ್ತಿಗಳ ಮೇಲೆ ದಾಳಿ ನಡೆಸಿದೆ.

ಪ್ರಸಕ್ತ ಗಂಗುಲಾ ಕಮಲಾಕರ್ ಅವರು ತನ್ನ ಕುಟುಂಬದೊಂದಿಗೆ ದುಬೈ ಪ್ರವಾಸದಲ್ಲಿದ್ದಾರೆಂದು ಮೂಲಗಳು ತಿಳಿಸಿವೆ.
ತೆಲಂಗಾಣದ ಸಚಿವನ ಮೇಲೆ ನಡೆದ  ಇ.ಡಿ. ದಾಳಿಯಿಂದಾಗಿ  ಬಿಜೆಪಿ ಹಾಗೂ ತೆಲಂಗಾಣ ರಾಷ್ಟ್ರ ಸಮಿತಿ ನಡುವೆ ಸಂಘರ್ಷ ಇನ್ನಷ್ಟು ಉಲ್ಪಣಗೊಳ್ಳುವ ಸಾಧ್ಯತೆಯಿದೆ.
ಇದೀಗ ಭಾರತ ರಾಷ್ಟ್ರ ಸಮಿತಿ ಎಂದು ಮರುನಾಮಕರಣಗೊಂಡಿರುವ ಟಿಆರ್‌ಎಸ್ ಪಕ್ಷವು ಮುನುಗೋಡ್ ವಿಧಾನಸಭಾ ಉಪಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ನಾಲ್ಕೇ ದಿನಗಳ ಬಳಿಕ ಈ.ಡಿ. ದಾಳಿ ನಡೆದಿದೆ.

Similar News