ಪುತ್ತೂರು | ಹಲ್ಲೆ ನಡೆಸಿ ಜೀವ ಬೆದರಿಕೆ: ಆರೋಪಿಗಳಿಗೆ ಜಾಮೀನು

Update: 2022-11-15 10:57 GMT

ಪುತ್ತೂರು: ಎರಡು ಪ್ರತ್ಯೇಕ ಪ್ರಕರಣದಲ್ಲಿ ಮಹಿಳೆಯೊಬ್ಬರಿಗೆ ಹಾಗೂ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ ಪುತ್ತೂರು ನ್ಯಾಯಾಲಯವು ಜಾಮೀನು ಮಂಜೂರುಗೊಳಿಸಿದೆ.

ಪುತ್ತೂರು ತಾಲೂಕಿನ ಕೊಡಿಂಬಾಡಿ ಗ್ರಾಮದ ಬಾರಿಕೆ ಮೇಲಿನಹಿತ್ಲು ಪವಿತ್ರಾ ಮೋಹನ್ ಎಂಬವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಆರೋಪದಲ್ಲಿ ಪವಿತ್ರಾ ಮೋಹನ್ ಅವರ ತಾಯಿ ಲೀಲಾವತಿ, ಸಹೋದರ ದೀಕ್ಷಿತ್ ಮತ್ತು ನಾದಿನಿ ನಿಶ್ಮಿತಾ ಅವರ ವಿರುದ್ದ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳು ಪುತ್ತೂರು ನ್ಯಾಯಾಲಯಕ್ಕೆ ಶರಣಾಗಿದ್ದು, ನ್ಯಾಯಾಲಯ ಆರೋಪಿಗಳಿಗೆ ಜಾಮೀನು ಮಂಜೂರುಗೊಳಿಸಿದೆ. ಇನ್ನೊಂದು ಪ್ರಕರಣದಲ್ಲಿ ಕೋಡಿಂಬಾಡಿ ಗ್ರಾಮ ಪಂಚಾಯತ್ ಕಚೇರಿ ಬಳಿಯ ಮೋಹನ್ ಗೌಡ ಎಂಬವರ ಮನೆಯ ಕೆಲಸದ ಆಳು ಹಿರೇಂಬಂಡಾಡಿ ಗ್ರಾಮಕ ಕರೆಂಕಿ ನಿವಾಸಿ ಸುರೇಶ್ ಎಂಬವರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿ ಕೋಡಿಂಬಾಡಿ ನಿವಾಸಿಗಳಾದದ ಶೇಖರ ಪೂಜಾರಿ, ಸುರೇಶ್, ಆಶೋಕ್, ರತ್ನಾಕರ, ಕೃಷ್ಣಪ್ಪ , ಮನೋಜ್, ಉಮೇಶ್, ಪ್ರಮೋದ್, ಉಮೇಶ್ ಮತ್ತುಪ್ರದೀಪ್ ಎಂಬವರ ಮೇಲೆ ಪುತ್ತೂರು ನಗರ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

ಈ ಪೈಕಿ ಶೇಖರ ಪೂಜಾರಿ, ಸುರೇಶ್, ಆಶೋಕ್, ರತ್ನಾಕರ, ಕೃಷ್ಣಪ್ಪ ಎಂಬವರು ನ್ಯಾಯಾಲಯಕ್ಕೆ ಶರಣಾಗಿದ್ದು, ನ್ಯಾಯಾಲಯ ಅವರಿಗೆ ಜಾಮೀನು ಮಂಜೂರುಗೊಳಿಸಿದೆ

Similar News