ಈಡಿ, ಸಿಬಿಐ ನಿಯಂತ್ರಣ ನನಗೆ ಕೊಡಿ, ಅರ್ಧಕ್ಕಿಂತ ಹೆಚ್ಚು ಬಿಜೆಪಿ ನಾಯಕರು ಜೈಲಿನಲ್ಲಿರುತ್ತಾರೆ: ಕೇಜ್ರಿವಾಲ್

Update: 2022-11-25 10:36 GMT

ಹೊಸದಿಲ್ಲಿ: ಕೇಂದ್ರ ತನಿಖಾ ಸಂಸ್ಥೆಗಳನ್ನು ತಾವೇ ನಿಯಂತ್ರಿಸುತ್ತಿರುವುದರಿಂದ ಭಾರತೀಯ ಜನತಾ ಪಕ್ಷದ ನಾಯಕರ ವಿರುದ್ಧ ಯಾವುದೇ ಭ್ರಷ್ಟಾಚಾರ ಆರೋಪಗಳಿಲ್ಲ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ Delhi Chief Minister Arvind Kejriwal ಹೇಳಿದ್ದಾರೆ ಎಂದು NDTV ವರದಿ ಮಾಡಿದೆ.

"ಕೇಂದ್ರೀಯ ತನಿಖಾ ದಳ, ಜಾರಿ ನಿರ್ದೇಶನಾಲಯದ ಮೇಲಿನ ನಿಯಂತ್ರಣ  ನನಗೆ ನೀಡಿ, ಅರ್ಧಕ್ಕಿಂತ ಹೆಚ್ಚು ಬಿಜೆಪಿ ನಾಯಕರು ಜೈಲಿನಲ್ಲಿ ಇರುವುದನ್ನು ನೀವು ನೋಡುತ್ತೀರಿ'' ಎಂದು ಆಮ್ ಆದ್ಮಿ ಪಕ್ಷದ ನಾಯಕ ಹೇಳಿದರು.

"ಕಳೆದ ಏಳು ವರ್ಷಗಳಲ್ಲಿ  ರಾಷ್ಟ್ರ ರಾಜಧಾನಿಯಲ್ಲಿ ತಮ್ಮ ಪಕ್ಷವು ಸರಕಾರವನ್ನು ರಚಿಸಿದಾಗಿನಿಂದ ಬಿಜೆಪಿಯು ಎಎಪಿ ನಾಯಕರ ವಿರುದ್ಧ 167 ಪ್ರಕರಣಗಳನ್ನು ದಾಖಲಿಸಿದೆ ಹಾಗೂ  ಅವುಗಳಲ್ಲಿ ಯಾವುದೂ ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ. 150ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಎಎಪಿ ನಾಯಕರನ್ನು ಮುಕ್ತಗೊಳಿಸಲಾಗಿದೆ'' ಎಂದು ಕೇಜ್ರಿವಾಲ್ ಹೇಳಿದ್ದಾರೆ.

Similar News