ಬಿಜೆಪಿ-ಎಎಪಿ ನಡುವೆ ಮೌನ ಒಡಂಬಡಿಕೆ: ಸಂಜಯ್ ರಾವುತ್

Update: 2022-12-08 07:23 GMT

ಮುಂಬೈ: ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಆಡಳಿತಾರೂಢ ಬಿಜೆಪಿ ಪ್ರಭಾವಿ ಪ್ರದರ್ಶನ ನೀಡಿದ್ದು, ನಿರೀಕ್ಷಿತ ಮಟ್ಟದಲ್ಲಿದೆ. ಬಿಜೆಪಿ ಹಾಗೂ ಆಪ್  ಪಕ್ಷದ ನಡುವೆ  ಮೌನ ಒಡಂಬಡಿಕೆಯಾಗಿದೆಯೇ ಎಂದು ಜನರು ಶಂಕಿಸುತ್ತಿದ್ದಾರೆ ಎಂದು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್ ಗುರುವಾರ ಹೇಳಿದ್ದಾರೆ.

ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, "ಎಎಪಿ ಮತ್ತು ಇತರ ಪಕ್ಷಗಳು ಒಗ್ಗೂಡಿ, ಮೈತ್ರಿ ಮಾಡಿಕೊಂಡಿದ್ದರೆ ಅಥವಾ ಒಂದು ತಿಳುವಳಿಕೆಗೆ ಬಂದಿದ್ದರೆ ಬಿಜೆಪಿಗೆ ಕಠಿಣ ಹೋರಾಟ ನೀಡಬಹುದಿತ್ತು. ನೀವು (ಎಎಪಿ) ದಿಲ್ಲಿ ಮಹಾನಗರ ಪಾಲಿಕೆಯನ್ನು ತೆಗೆದುಕೊಂಡು ಗುಜರಾತ್ ಅನ್ನು ನಮಗೆ (ಬಿಜೆಪಿ) ಬಿಟ್ಟುಕೊಡಿ ಎಂಬ ಬಗ್ಗೆ ಎರಡೂ ಪಕ್ಷಗಳ ನಡುವೆ ಒಡಂಬಡಿಕೆ ನಡೆದಿರುವ ಕುರಿತು ಜನರಿಗೆ ಅನುಮಾನವಿದೆ" ಎಂದು ರಾವುತ್  ಹೇಳಿದ್ದಾರೆ.

Similar News