ಮಂಗಳೂರು | ಪ್ರತಿಭಟನೆಯಲ್ಲಿ ಕೆಪಿಟಿಯ ವಿದ್ಯಾರ್ಥಿಗಳು ಪಾಲ್ಗೊಂಡಿಲ್ಲ: ಕೆಪಿಟಿ ವಿದ್ಯಾರ್ಥಿ ಲಿಖಿತ್ ಸ್ಪಷ್ಟನೆ

Update: 2022-12-08 10:20 GMT

ಮಂಗಳೂರು: ನಗರದ ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್ (ಕೆಪಿಟಿ)ನಲ್ಲಿ ಡಿ.5ರಂದು ನಡೆದ ಪ್ರತಿಭಟನೆಯಲ್ಲಿ ಕೆಪಿಟಿಯ ಯಾವುದೇ ವಿದ್ಯಾರ್ಥಿಗಳು ಪಾಲ್ಗೊಂಡಿಲ್ಲ ಎಂದು ಕೆಪಿಟಿ ವಿದ್ಯಾರ್ಥಿ ಲಿಖಿತ್ ಹೇಳಿದರು.

ಕೆಪಿಟಿಯ ಹಲವು ಉಪನ್ಯಾಸಕರು, ವಿಭಾಗ ಮುಖ್ಯಸ್ಥರು ವರ್ಗಾವಣೆಯಾಗಿದೆ ಎಂಬ ಸುದ್ದಿಯೂ ಸತ್ಯಕ್ಕೆ ದೂರವಾದದ್ದು. ಇತ್ತೀಚಿನ ಒಂದು ವರ್ಷದಲ್ಲಿ ಆ ರೀತಿಯ ಯಾವುದೇ ವರ್ಗಾವಣೆ ಆಗಿರುವುದಿಲ್ಲ. ಕೆಪಿಟಿ ಸಂಸ್ಥೆಯಲ್ಲಿ ಪ್ರತೀ ತರಗತಿ ಪ್ರತಿನಿಧಿಗಳನ್ನು ಒಳಗೊಂಡ ವಿದ್ಯಾರ್ಥಿ ಸಂಘವು ಅಸ್ತಿತ್ವದಲ್ಲಿದ್ದು, ಸಂಸ್ಥೆಗೆ ಸಂಬಂಧಿಸಿದ ಯಾವುದೇ ಕುಂದು ಕೊರತೆಗಳನ್ನು ಮತ್ತು ಅನಾನುಕೂಲಗಳನ್ನು ಕಾಲಕಾಲಕ್ಕೆ ಉಪನ್ಯಾಸಕರು, ವಿಭಾಗ ಮುಖ್ಯಸ್ಥರು ಹಾಗೂ ಪ್ರಾಂಶುಪಾಲರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆ ಇದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅಬ್ದುಲ್ ಹಿಶಾಮ್, ಪವನ್ ಕುಮಾರ್, ರೂಪಶ್ರೀ, ಕೌಶಿಕ್ ಉಪಸ್ಥಿತರಿದ್ದರು.

Similar News