ಬಸ್ ಢಿಕ್ಕಿ: ಪಾದಚಾರಿ ಮೃತ್ಯು
Update: 2022-12-08 16:20 GMT
ಬ್ರಹ್ಮಾವರ, ಡಿ.8: ಗುರುವಾರ ಅಪರಾಹ್ನ 12:55ರ ಸುಮಾರಿಗೆ ವೃದ್ಧರೊಬ್ಬರು ಉಪ್ಪೂರು ಗ್ರಾಮದ ಜಾತಬೆಟ್ಟು ಕಡೆಗೆ ತೆರಳಲು ರಾ.ಹೆದ್ದಾರಿ 66ನ್ನು ದಾಟುತಿದ್ದಾಗ ವೇಗವಾಗಿ ಧಾವಿಸಿ ಬಸ್ಸೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ನಾರಾಯಣ ಪೂಜಾರಿ(65) ಎಂದು ಗುರುತಿಸಲಾಗಿದೆ. ಇವರು ಉಪ್ಪೂರಿನ ಪ್ರದೀಪ್ ಮಧ್ಯಸ್ಥರ ಅಂಗಡಿ ಎದುರಿನಿಂದ ಜಾತಬೆಟ್ಟು ಕಡೆಗೆ ತೆರಳಲು ಹೆದ್ದಾರಿ ದಾಟುತಿದ್ದಾಗ ಕುಂದಾಪುರ ಕಡೆಯಿಂದ ವೇಗವಾಗಿ ಧಾವಿಸಿ ಬಂದ ಮಕ್ಕಳ ಟೂರಿಸ್ಟ್ ಬಸ್ಸೊಂದು ಅವರಿಗೆ ಡಿಕ್ಕಿ ಹೊಡೆದಿತ್ತು. ಇದರಿಂದ ರಸ್ತೆಗೆ ಬಿದ್ದ ನಾರಾಯಣ ಪೂಜಾರಿ ತಲೆಗೆ ತೀವ್ರವಾಗಿ ಬಿದ್ದ ಪೆಟ್ಟಿನಿಂದ ಸ್ಥಳದಲ್ಲೇ ಮೃತಪಟ್ಟರು. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.