ಕೋರ್ಟ್ ಸಿಬ್ಬಂದಿ ಆತ್ಮಹತ್ಯೆ: ಜೈಪುರ ನ್ಯಾಯಾಧೀಶರ ವಿರುದ್ಧ ಕೊಲೆ ಪ್ರಕರಣ ದಾಖಲು

Update: 2022-12-14 03:14 GMT

ಜೈಪುರ: ಕೋರ್ಟ್ ಸಿಬ್ಬಂದಿಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಉದ್ಯೋಗಿಯ ಕುಟುಂಬದವರು ನೀಡಿದ ದೂರಿನ ಮೇರೆಗೆ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರೊಬ್ಬರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ndtv.com ವರದಿ ಮಾಡಿದೆ.

ಸುಭಾಷ್ ಮೆಹ್ರಾ ಎಂಬವರ ಸಾವಿನ ಸಂಬಂಧ ಜೈಪುರದ ಎನ್‍ಡಿಪಿಎಸ್ ಕೋರ್ಟ್‍ನ ನ್ಯಾಯಾಧೀಶ ಕೆ.ಎಸ್.ಚಲಾನಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸಿಪಿ ಅನಿಲ್ ಕುಮಾರ್ ಶರ್ಮಾ ಹೇಳಿದ್ದಾರೆ.

ಸುಭಾಷ್ ಮೆಹ್ರಾ ಅವರು ನ್ಯಾಯಾಧೀಶರ ಕಮಲಾ ನೆಹ್ರೂ ನಗರ ಮನೆಯಲ್ಲಿ ನವೆಂಬರ್ 10ರಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದರು.

ಈ ಸಾವಿನ ಹಿನ್ನೆಲೆಯಲ್ಲಿ ಸುಭಾಷ್ ಮೆಹ್ರಾ ಕುಟುಂಬದ ಸದಸ್ಯರು ಮತ್ತು ನ್ಯಾಯಾಂಗ ಉದ್ಯೋಗಿಗಳ ಸಂಘದ ಸದಸ್ಯರು ಪ್ರತಿಭಟನೆ ಆರಂಭಿಸಿದ್ದರು ಹಾಗೂ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಆಪಾದಿಸಿ ನ್ಯಾಯಾಧೀಶರ ವಿರುದ್ಧ ಪ್ರಕರಣ ದಾಖಲಿಸಲು ಒತ್ತಾಯಿಸಿದ್ದರು.

Similar News