ಪಶ್ಚಿಮ ಬಂಗಾಳ: ಬೀಡಿ ಕಂಪೆನಿಗಳ ಮೇಲೆ ದಾಳಿ; 11 ಕೋ. ರೂ. ವಶ

Update: 2023-01-12 16:57 GMT

ಕೋಲ್ಕತಾ, ಜ. 12: ರಾಜಕಾರಣಿಗಳು ಹಾಗೂ ಇತರ ಕೆಲವರಿಗೆ ನಂಟು ಹೊಂದಿದ ಪಶ್ಚಿಮಬಂಗಾಳದ ವಿವಿಧ ಸ್ಥಳಗಳು ಹಾಗೂ ಉದ್ಯಮಗಳ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ 11 ಕೋ.ರೂ.ಗೂ ಅಧಿಕ ನಗದನ್ನು ವಶಪಡಿಸಿಕೊಂಡಿದೆ. ‌

ಕೋಲ್ಕತ್ತಾ ಹಾಗೂ ಮುರ್ಶಿದಾಬಾದ್ ನಲ್ಲಿ ಆದಾಯ ತೆರಿಗೆ ಇಲಾಖೆ ಬುಧವಾರ ದಾಳಿ ನಡೆಸಿತು. ಈ ಪ್ರದೇಶಗಳಲ್ಲಿರುವ ಕೆಲವು ಬೀಡಿ ಕಂಪೆನಿಗಳು ಹಾಗೂ ಇತರ ಕೆಲವು ಉದ್ಯಮ ಕೇಂದ್ರಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಬೀಡಿ ಕಾರ್ಖಾನೆಗಳೊಂದಿಗೆ ಸ್ಥಳೀಯ ರಾಜಕಾರಣಿಗಳು ನಂಟು ಹೊಂದಿದ್ದಾರೆ. 

ಈ ದಾಳಿಯಲ್ಲಿ 11 ಕೋ.ರೂ.ಗೂ ಅಧಿಕ ನಗದನ್ನು ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿದೆ. ಈ ಉದ್ಯಮಗಳು ದಾಖಲೆ ಪುಸ್ತಕದ ಹೊರತಾಗಿ ನಗದು ವರ್ಗಾವಣೆಯಲ್ಲಿ ತೊಡಗಿಕೊಂಡಿವೆ. ಆ ಮೂಲಕ ತೆರಿಗೆ ವಂಚನೆ ನಡೆಸುತ್ತಿವೆ ಎಂಬ ಮಾಹಿತಿ ಸ್ವೀಕರಿಸಿದ ಬಳಿಕ ಆದಾಯ ತೆರಿಗೆ ಇಲಾಖೆ ಈ ದಾಳಿ ನಡೆಸಿದೆ. 

Similar News