ರಣಜಿ ಟ್ರೋಫಿಯಲ್ಲಿ ಶತಕ ಬಾರಿಸಿದ ಸರ್ಫ್‌ರಾಝ್‌ ಖಾನ್:‌ ʼಸಂಭ್ರಮಾಚರಣೆಯೇ ಎಲ್ಲವನ್ನೂ ಹೇಳುತ್ತಿವೆʼ ಎಂದ ನೆಟ್ಟಿಗರು

Update: 2023-01-17 11:35 GMT

ಮುಂಬೈ: ರಣಜಿ ಟ್ರೋಫಿಯಲ್ಲಿನ ಪಂದ್ಯಾಟಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಾ ಇದ್ದರೂ ಮುಂಬೈನ ಯುವ ಕ್ರಿಕೆಟಿಗ ಸರ್ಫ್‌ರಾಝ್‌ ಖಾನ್‌ ಗೆ ಭಾರತೀಯ ಕ್ರಿಕೆಟ್‌ ತಂಡದಲ್ಲಿ ಸ್ಥಾನ ನೀಡದೇ ಇದ್ದದ್ದು ಕಳೆದ ವಾರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಅವರು ರಣಜಿ ಟ್ರೋಫಿಯಲ್ಲಿ ಸಾಕಷ್ಟು ರನ್ ಗಳಿಸಿದ್ದರೂ, ಮುಂಬರುವ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಅವರನ್ನು ಆಯ್ಕೆ ಮಾಡದಿದ್ದುದು ಆಕ್ರೋಶಕ್ಕೆ ತುತ್ತಾಗಿತ್ತು. ಆದರೆ ಇದೀಗ ಮತ್ತೊಂದು ಶತಕ ಬಾರಿಸುವ ಮೂಲಕ ಸರ್ಫ್‌ರಾಝ್‌ ಖಾನ್‌ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾರೆ.

ಕಳೆದ ವಾರ ಆಯ್ಕೆ ಪಟ್ಟಿಯಲ್ಲಿ ಖಾನ್‌ ಹೆಸರು ಕಾಣೆಯಾಗಿದ್ದರ ಕುರಿತು ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಭರವಸೆಯ ಪ್ರತಿಭೆಯನ್ನು ಕಡೆಗಣಿಸಿದ್ದಕ್ಕಾಗಿ ಬಿಸಿಸಿಐ ವಿರುದ್ಧ ಕಿಡಿಕಾರಿದ್ದರು. ಇದೀಗ ಫಿರೋಜ್ ಷಾ ಕೋಟ್ಲಾದಲ್ಲಿ ದಿಲ್ಲಿ ತಂಡದ ವಿರುದ್ಧ ಮುಂಬೈ ಪರ ಆಡುತ್ತಿರುವಾಗ ಸರ್ಫರಾಜ್ ಮತ್ತೊಂದು ಶತಕ ಗಳಿಸಿದ್ದಾರೆ. ಇದೀಗ ಮತ್ತೊಮ್ಮೆ ಸಾಮಾಜಿಕ ತಾಣದಲ್ಲಿ ಅವರ ಪರ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ.

ಹಲವಾರು ಪ್ರತಿಕ್ರಿಯೆಗಳಲ್ಲಿ ಕೆಲವು ಪ್ರತಿಕ್ರಿಯೆಗಳು ಹೀಗಿವೆ.

Similar News