ಕಾಂಗ್ರೆಸ್ ತೊರೆದ ಕೆಲವೇ ಗಂಟೆಗಳಲ್ಲಿ ಬಿಜೆಪಿ ಸೇರ್ಪಡೆಗೊಂಡ ಮನ್‌ಪ್ರೀತ್ ಸಿಂಗ್ ಬಾದಲ್

Update: 2023-01-18 09:48 GMT

ಚಂಡೀಗಢ/ಹೊಸದಿಲ್ಲಿ: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಪಂಜಾಬ್ ಮಾಜಿ ಹಣಕಾಸು ಸಚಿವ ಮನ್‌ಪ್ರೀತ್ ಸಿಂಗ್ ಬಾದಲ್ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದ ಕೆಲವೇ ಗಂಟೆಗಳ ನಂತರ ಇಂದು ಬಿಜೆಪಿ ಸೇರಿದ್ದಾರೆ. ರಾಹುಲ್ ಗಾಂಧಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ, ಬಾದಲ್ ಅವರು ಕಾಂಗ್ರೆಸ್ನಿಂದ "ಭ್ರಮನಿರಸನಗೊಂಡಿದ್ದಾರೆ" ಎಂದು ಹೇಳಿದ್ದಾರೆ.

"ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ನಾನು ಪ್ರತಿ ಔನ್ಸ್ ಶಕ್ತಿಯನ್ನು ವಿನಿಯೋಗಿಸಿದ್ದೇನೆ. ನನಗೆ ಈ ಅವಕಾಶಗಳನ್ನು ಒದಗಿಸಿದ್ದಕ್ಕಾಗಿ ಮತ್ತು ಈ ಹಿಂದೆ ನೀವು ನನಗೆ ತೋರಿದ ದಯೆ ಮತ್ತು ಸೌಜನ್ಯಕ್ಕಾಗಿ ನಿಮಗೆ ಧನ್ಯವಾದಗಳು" ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿರುವ ಪತ್ರದಲ್ಲಿ ತಿಳಿಸಿದ್ದಾರೆ.

"ವಿಷಾದಕರವೆಂಬಂತೆ, ಪಕ್ಷದೊಳಗಿನ ಈಗಿನ ಸಂಸ್ಕೃತಿ ಮತ್ತು ತಿರಸ್ಕಾರ ಭಾವವನ್ನು ಗಮನಿಸಿದರೆ, ನಾನು ಇನ್ನು ಮುಂದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಭಾಗವಾಗಲು ಬಯಸುವುದಿಲ್ಲ ಎಂದು ಅವರು ಹೇಳಿದರು.

ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ ಮನ್‌ಪ್ರೀತ್ ಸಿಂಗ್ ಬಾದಲ್, "ಏಳು ವರ್ಷಗಳ ಹಿಂದೆ ನಾನು ಪೀಪಲ್ಸ್ ಪಾರ್ಟಿ ಆಫ್ ಪಂಜಾಬ್ ಅನ್ನು ನಿಮ್ಮ ಪಕ್ಷದೊಂದಿಗೆ ವಿಲೀನಗೊಳಿಸಿದ್ದೇನೆ. ನಾನು ಅಪಾರ ಭರವಸೆ ಮತ್ತು ಸಂಘಟನೆಯಲ್ಲಿ ಏಕೀಕರಣಗೊಳ್ಳುವ ನಿರೀಕ್ಷೆಯೊಂದಿಗೆ ಮಾಡಿದ್ದೆ" ಎಂದು ಅವರು ಹೇಳಿದರು.

Similar News