ತೆಲಂಗಾಣ: ಗಣರಾಜ್ಯೋತ್ಸವ ಪರೇಡ್ ಗೆ ಕೆಸಿಆರ್ ಗೈರು

ಗಣರಾಜ್ಯೋತ್ಸವ ಸಂಭ್ರಮಕ್ಕೆ ರಾಜ್ಯಪಾಲೆ-ಸಿಎಂ ಸಂಘರ್ಷದ ಕರಿನೆರಳು

Update: 2023-01-26 15:35 GMT

ಹೈದರಾಬಾದ್,ಜ.26: ಇಲ್ಲಿನ ರಾಜಭವನದಲ್ಲಿ ಗುರುವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಗೈರುಹಾಜರಾಗಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ. ತೆಲಂಗಾಣ ರಾಜ್ಯಪಾಲೆ ತಮಿಳ್ ಇಸೈ ಸೌಂದರರಾಜನ್ ಅವರು ಧ್ವಜಾರೋಹಣವನ್ನು ನರವೇರಿಸಿದರು.

ಕೊರೋನ ವೈರಸ್ಗೆ ಸಂಬಂಧಿಸಿದ ನಿರ್ಬಂಧಗಳಿಲ್ಲದ ಹೊರತಾಗಿಯೂ ಸತತ ಎರಡನೆಯ ವರ್ಷವೂ  ತೆಲಂಗಾಣ ರಾಜ್ಯಪಾಲೆಯವರಿಗೆ ಸರಕಾರಿ ಪಡೆಗಳ ಗೌರವರಕ್ಷೆ ನೀಡಲಾಗಿಲ್ಲವೆಂದು ಎನ್ಡಿಟಿವಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಕಳೆದ ಒಂದು ವರ್ಷದಿಂದ ತಮಿಳು ಇಸೈ  ಹಾಗೂ ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿ ಸರಕಾರದ ನಡುವೆ ಆಗಾಗ್ಗೆ ಸಂಘರ್ಷಗಳು ನಡೆಯುತ್ತಲೇ ಇವೆ.ಕೆ.ವಿ. ಚಂದ್ರಶೇಖರ್ ರಾವಂ ಸರಕಾರದ ಕಾರ್ಯನಿರ್ವಹಣೆಯನ್ನು  ರಾಜ್ಯಪಾಲೆ ಟೀಕಿಸುತ್ತಿದ್ದರೆ, ಬಿಆರ್ಎಸ್ ಪಕ್ಷವು ಆಕೆಯನ್ನು ಕೇಂದ್ರದ ಏಜೆಂಟ್ ಎಂದು ಆರೋಪಿಸುತ್ತಿದೆ.

ಬುಧವಾರದಂದು ತೆಲಂಗಾಣ ಹೈಕೋರ್ಟ್ ಆದೇಶವೊಂದನ್ನು ನೀಡಿ ಸರಕಾರಿ ಪಡೆಗಳ ಗೌರವ ರಕ್ಷೆ ಸೇರಿದಂತೆ ಪೂರ್ಣಮಟ್ಟದ ಗಣರಾಜ್ಯೋತ್ಸವವನ್ನು ಆಚರಿಸುವಂತೆ  ಕೆ.ವಿ.ಚಂದ್ರಶೇಖರ್ ರಾವ್ ಸರಕಾರಕ್ಕೆ ಆದೇಶ ನೀಡಿತ್ತು.  ಈ ಕಾರ್ಯಕ್ರಮದಲ್ಲಿ ಪೌರರ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡುವಂತೆಯೂ ಅದು ತಿಳಿಸಿತ್ತು.

ಕೋವಿಡ್19 ಸಾಂಕ್ರಾಮಿಕದ ಭೀತಿಯ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವ ರಾಜಭಾವನದ ಆವರಣದಲ್ಲಿ ನಡೆಸುವ ಉದ್ದೇಶವನ್ನು ತಾನು ಹೊಂದಿರುವುದಾಗಿ ರಾಜ್ಯ ಸರಕಾರವು  ಹೈಕೋರ್ಟ್ ಗೆ ತಿಳಿಸಿತ್ತು. ಸಾರ್ವಜನಿಕರ ವೀಕ್ಷಣೆಗಾಗಿ ಆನ್ಲೈನ್ ಮೂಲಕ ಗಣರಾಜ್ಯೋತ್ಸವ ಕಾರ್ಯಕ್ರಮದ ಪ್ರಸಾರಕ್ಕೆ ಏರ್ಪಾಡು ಮಾಡಲಾಗಿದೆಯೆಂದು ಅದು ಕೋರ್ಟ್ ಗೆ ತಿಳಿಸಿತ್ತು.

ಆದರೆ ತೆಲಂಗಾಣ ಸರಕಾರವನ್ನು ಪ್ರತಿನಿಧಿಸಿದ್ದ ಅಡ್ವೋಕೇಟ್ ಜನರಲ್ ಅವರನ್ನುದ್ದೇಶಿಸಿ ಹೇಳಿದ ನ್ಯಾಯಾಲವು ಕೋವಿಡ್19 ಹಾವಳಿಯ ಹಿನ್ನೆಲೆಯಲ್ಲಿ ಅಧಿಕೃತ ಕಾರ್ಯಕ್ರಮಗಳನ್ನು ಹೇಗೆ ನಡೆಸಬೇಕೆಂಬ ಬಗ್ಗೆ ಸರಕಾರವು ಯಾವುದೇ ಮಾಗರ್ಶಿ ಸೂತ್ರಗಳನ್ನು ಈ ತನಕ ಯಾಕೆ ಪ್ರಕಟಿಸಿಲ್ಲವೆಂದು ಪ್ರಸ್ನಿಸಿತು.

ಗಣರಾಜ್ಯೋತ್ಸವ ಆಚರಣೆಗೆ ಸಂಬಂಧಿಸಿ ಕೇಂದ್ರ ಸರಕಾರವು ಮಾರ್ಗದರ್ಶಿ ಸೂತ್ರಗಳನ್ನು   ಜಾರಿಗೊಳಿಸಿದ್ದು, ರಾಜ್ಯಗಳು ಹಾಗೂ ಕೇಂದ್ರಾಡಳಿತಗಳು ಅದನ್ನು ತಮ್ಮ  ಸಾಮರ್ಥ್ಯಕ್ಕೆ ಸಾಧ್ಯವಾಗುವಷ್ಟು ಮಟ್ಟಿಗೆ ಅನುಸರಿಸಬೇಕಾಗಿದೆ  ಎಂದು ನ್ಯಾಯಮೂರ್ತಿ ಪಿ. ಮಾಧವಿ ದೇವಿ ತೆಲಂಗಾಣ ಸರಕಾರಕ್ಕೆ ಸೂಚಿಸಿದರು.

‘‘ಗಣರಾಜ್ಯೋತ್ಸವವು ರಾಷ್ಟ್ರೀಯ ಹಬ್ಬವಾಗಿದ್ದು ಅದನ್ನು  ಸಂಭ್ರಮೋಲ್ಲಾಸ, ಭವ್ಯತೆ ಹಾಗೂ ಉತ್ಸಾಹದೊಂದಿಗೆ ಆಚರಿಸಬೇಕೆಂದು  ನ್ಯಾಯಮೂರ್ತಿ ಪಿ. ಮಾಧವಿ ದೇವಿ ಸೂಚಿಸಿದರು.

Similar News