ಕೋಟ: ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮಫಲಕ ಅನಾವರಣ

Update: 2023-01-27 13:15 GMT

ಕೋಟ: ಜನಸೇವಾ ಟ್ರಸ್ಟ್ ಮೂಡುಗಿಳಿಯಾರು, ಹಸ್ತ ಚಿತ್ತ ಫೌಂಡೇಶನ್, ವಕ್ವಾಡಿ, ಉಸಿರು ಕೋಟ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಬ್ರಹ್ಮಾವರ ತಾಲೂಕು ಘಟಕ, ಭಗತ್ ಸಿಂಗ್ ಯುವ ವೇದಿಕೆ ಕೋಟ, ರಾಷ್ಟ್ರೀಯ ಸೇವಾ ಯೋಜನಾ ಘಟಕ  ಕಾಳಾವರ ವರದರಾಜ ಎಂ.ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಇವುಗಳ ಸಹಯೋಗದೊಂದಿಗೆ ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮಫಲಕ’ ಅನಾವರಣ ಕಾರ್ಯಕ್ರಮ ‘ಹೊಂಬೆಳಕು’ ಜ.26ರಂದು ಕೋಟ ಶಿವರಾಮ ಕಾರಂತ ಥೀಮ್ ಪಾರ್ಕಿನಲ್ಲಿ ನಡೆಯಿತು.

ಸ್ವರಾಜ್ಯ 75 ತಂಡದ ’ಹೊಂಬೆಳಕು’ ಇದು ಸ್ವಾತಂತ್ರ್ಯದ ಹಣತೆ ಎಂಬ ಅಡಿ ಬರಹದಲ್ಲಿ ಸ್ವಾತಂತ್ರ್ಯ ಹೋರಾಟಗಾರರ  ಸ್ಥಳ ಗುರುತಿಸುವ ಕಾರ್ಯದ ಹಿನ್ನೆಲೆ 23ನೇ ಸ್ಥಳವಾಗಿ ಡಾ.ಕೋಟ ಶಿವರಾಮ ಕಾರಂತ ಥಿಮ್ ಪಾರ್ಕ್‌ನಲ್ಲಿ ನಾಮಫಲಕವನ್ನು ಹಿರಿಯ ಪರಿಸರವಾದಿ ಕೋಟ ಗಿರೀಶ್ ನಾಯಕ್ ಅನಾವರಣಗೊಳಿಸಿದರು.

ಅನೀತಾ ನರೇಂದ್ರ ಕುಮಾರ್ ಕೋಟ ರಾಷ್ಟ್ರ ಧ್ವಜಕ್ಕೆ ಪುಷ್ಪ ನಮನ ಸಲ್ಲಿಸಿ ಚಾಲನೆ ನೀಡಿದರು. ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರಾವಳಿಗರ ಕೊಡುಗೆ ಇದರೊಂದಿಗೆ ಕೋಟ ಶಿವರಾಮ ಕಾರಂತರ ಸೇವೆಯ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಪ್ರೊ.ಟಿ.ಮುರುಗೇಶ್ ಮಾಹಿತಿ ನೀಡಿದರು.

ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾಪಂ ಅಧ್ಯಕ್ಷೆ ಅಶ್ವಿನಿ ದಿನೇಶ್ ವಹಿಸಿದ್ದರು. ಪ್ರಮುಖರಾದ ರಾಮಚಂದ್ರ ಐತಾಳ್, ವಾಸು ಪೂಜಾರಿ, ಸುಬ್ರಾಯ ಆಚಾರ್ಯ ಕೋಟ, ಶ್ವೇತ ಉಲ್ಲಾಸ್, ಸುಬ್ರಹ್ಮಣ್ಯ ಶೆಟ್ಟಿ, ಪ್ರಸಾದ್ ಬಿಲ್ಲವ ಉಪಸ್ಥಿತರಿದ್ದರು. ನವ್ಯ ಕುಂದಾಪುರ ಕಾರ್ಯಕ್ರಮ ನಿರೂಪಿಸಿದರು. ಸ್ವರಾಜ್ಯ 75 ಕಾರ್ಯಕ್ರಮದ ಸಂಚಾಲಕ ಪ್ರದೀಪ ಕುಮಾರ್ ಬಸ್ರೂರು ಪ್ರಸ್ತಾವಿಕವಾಗಿ ಮಾತನಾಡಿದರು. ಅಕ್ಷತಾ ಗಿರೀಶ್ ಐತಾಳ್ ವಂದಿಸಿದರು.

Similar News