ಮುಸ್ಲಿಮ್ ಒಕ್ಕೂಟದ ಕುಂದಾಪುರ ತಾಲೂಕು ಅಧ್ಯಕ್ಷರಾಗಿ ದಸ್ತಗೀರ್ ಆಯ್ಕೆ

Update: 2023-01-28 10:42 GMT

 ಕುಂದಾಪುರ, ಜ.28: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕುಂದಾಪುರ ತಾಲೂಕು ಅಧ್ಯಕ್ಷರಾಗಿ ಎಸ್.ದಸ್ತಗೀರ್ ಕಂಡ್ಲೂರು ಆಯ್ಕೆಯಾಗಿದ್ದಾರೆ.

ಇಂದು ನಡೆದ ಕುಂದಾಪುರ ತಾಲೂಕು ಘಟಕದ ಸಭೆಯಲ್ಲಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ತಾಲೂಕು ಉಪಾಧ್ಯಕ್ಷರಾಗಿ ಎಸ್.ಎಸ್.ಹನೀಫ್ ಗುಲ್ವಾಡಿ, ಕಾರ್ಯದರ್ಶಿಯಾಗಿ ರಿಯಾಝ್ ಕೋಡಿ, ಜೊತೆ ಕಾರ್ಯದರ್ಶಿಯಾಗಿ ಜಿ. ಎಂ.ಅಬೂಬಕರ್ ಮಾವಿನಕಟ್ಟೆ, ಕೋಶಾಧಿಕಾರಿಯಾಗಿ ಮುಝಾವರ್ ಅಬು ಮುಹಮದ್

ಕುಂದಾಪುರ ಆಯ್ಕೆಯಾದರು.ಮುಹಮ್ಮದ್ ರಫೀಕ್ ಬಿ.ಎಸ್.ಎಫ್., ಶಾಬಾನ್ ಹಂಗಳೂರು, ಮೌಲಾನಾ ಝಮೀರ್ ಅಹ್ಮದ್ ರಶಾದಿ, ಜಿ.ರೆಹಾನ್ ತ್ರಾಸಿ, ಮುಹಮ್ಮದ್ ರಫೀಕ್ ವಂಡ್ಸೆ, ಎಸ್.ಮುನೀರ್ ಕಂಡ್ಲೂರು, ಪಳ್ಳಿ ಉಸ್ಮಾನ್ ಗುಲ್ವಾಡಿ, ಮುನಾಫ್ ಕೋಡಿ, ನಸೀರ್ ನಯ್ನಾರ್ ಕೋಡಿ, ಅಬ್ದುಲ್ ಖಾದರ್ ಮೂಡ ಗೋಪಾಡಿ ತಾಲೂಕು ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಝಹೀರ್ ನಾಖುದಾ ಗಂಗೊಳ್ಳಿ, ಫಾರೂ್ ಹಳವಳ್ಳಿ, ಮುಹಮ್ಮದ್ ರಫೀಕ್ ಬೆಳ್ವೆ, ಕಲಂದರ್ ಹಂಗಳೂರು ಅವರನ್ನು ತಾಲೂಕು ಸಮಿತಿಯ ಸದಸ್ಯರಾಗಿ ನಾಮ ನಿರ್ದೇಶನ ಮಾಡಲಾಯಿತು.

ನಿಕಟಪೂರ್ವ ಅಧ್ಯಕ್ಷ ಇಬ್ರಾಹೀಂ ಕೋಟ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮೌಲಾನಾ ಝಮೀರ್ ಅಹ್ಮದ್ ರಶಾದಿ ಕಿರಾಅತ್ ಪಠಿಸಿದರು. ಮುಹಮ್ಮದ್ ರಫೀಕ್ ಬಿ.ಎಸ್.ಎಫ್. ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇದ್ರೀಸ್ ಹೂಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್.ಕೆ.ಇಕ್ಬಾಲ್ ಕಟಪಾಡಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಜಿಲ್ಲಾ ಉಪಾಧ್ಯಕ್ಷರಾದ ಮುಹಮ್ಮದ್ ಮೌಲಾ ಉಡುಪಿ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು. ಹಾಲಿ ಅಧ್ಯಕ್ಷ ಮುಹಮ್ಮದ್ ರಫೀಕ್ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು.

Similar News