ಮಂಗಳೂರು ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಚನ್ನಬಸಪ್ಪ ಕೆ.

Update: 2023-02-02 13:20 GMT

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಆಯುಕ್ತರಾಗಿದ್ದ ಅಕ್ಷಯ್ ಶ್ರೀಧರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರಕಾರ ವರ್ಗಾವಣೆ ಮಾಡಿದೆ.

ತುಮಕೂರು ಜಿಲ್ಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಕೆಎಎಸ್ ಅಧಿಕಾರಿ ಚನ್ನಬಸಪ್ಪ.ಕೆ ಮುಂದಿನ ಆದೇಶದವರೆಗೆ ಮನಪಾ ಆಯುಕ್ತರಾಗಿ ಸರಕಾರ ನಿಯುಕ್ತಿಗೊಳಿಸಿದೆ.

2017ರ ಬ್ಯಾಚ್‌ನ  ಐಎಎಸ್ ಅಧಿಕಾರಿ ಅಕ್ಷಯ್ ಶ್ರೀಧರ್ ಅವರನ್ನು 2020ರಲ್ಲಿ ಎಂಸಿಸಿ ಕಮಿಷನರ್ ಆಗಿ ನೇಮಿಸಲಾಯಿತು.

Similar News