'ಹೆಮ್ಮೆಯ ಕ್ಷಣ': ಐಪಿಎಸ್‌ ಆದ ತನ್ನ ಪುತ್ರಿಗೆ ಸೆಲ್ಯೂಟ್‌ ಮಾಡಿದ ಅಸ್ಸಾಂ ಡಿಜಿಪಿ

Update: 2023-02-12 10:41 GMT

ಗುವಾಹಟಿ: ತಮ್ಮ ಮಕ್ಕಳು ತಮ್ಮ ವೃತ್ತಿ ಬದುಕಿನಲ್ಲಿ ಉನ್ನತ ಹಂತಕ್ಕೇರಬೇಕು ಎಂಬುದು ಪ್ರತಿಯೊಬ್ಬ ಪೋಷಕರ ಕನಸಾಗಿರುತ್ತದೆ. ಅಂತಹ ಒಂದು ಕನಸು ಅಸ್ಸಾಂ ಪೊಲೀಸ್ ಮಹಾ ನಿರ್ದೇಶಕರ ಪಾಲಿಗೆ ನನಸಾಗಿದೆ ಎಂದು timesnownews.com ವರದಿ ಮಾಡಿದೆ.

ಈ ಕುರಿತು ಸಂಭ್ರಮದ ಪೋಸ್ಟ್ ಒಂದನ್ನು ಟ್ವೀಟ್ ಮಾಡಿರುವ ಅಸ್ಸಾಂ ಪೊಲೀಸ್ ಮಹಾ ನಿರ್ದೇಶಕ ಗ್ಯಾನೇಂದ್ರ ಪ್ರತಾಪ್ ಸಿಂಗ್, ಅದರಲ್ಲಿ ತಮ್ಮ ಪುತ್ರಿಯು ಸರ್ದಾರ್ ವಲ್ಲಭ ಭಾಯಿ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಿಂದ ಹೊರ ಬರುತ್ತಿರುವುದು, ತಾವಿಬ್ಬರೂ ಪರಸ್ಪರ ವಂದಿಸಿಕೊಳ್ಳುತ್ತಿರುವ ಭಾವಚಿತ್ರವನ್ನು ಹಂಚಿಕೊಂಡಿದ್ದಾರೆ.

"ಮಾತುಗಳು ಹೊರಡಲಿಲ್ಲ. ಪುತ್ರಿ @aishwarya_ips, @svpnahydನಿಂದ ಹೊರಬರುವಾಗ ಆಕೆಯಿಂದ ವಂದನೆ ಸ್ವೀಕರಿಸಿದೆ. ಚಿತ್ರ ಕೃಪೆ @lrbishnoips" ಎಂದು ಗ್ಯಾನೇಂದ್ರ ಪ್ರತಾಪ್ ಸಿಂಗ್ ಟ್ವೀಟ್ ಮಾಡಿದ್ದಾರೆ.

Similar News