×
Ad

ಉಡುಪಿ: ಜೆಡಿಎಸ್ ಚುನಾವಣಾ ಪೂರ್ವಭಾವಿ ಸಭೆ

Update: 2023-02-17 19:19 IST

ಉಡುಪಿ: ಜನತಾದಳ (ಜಾತ್ಯತೀತ) ಪಕ್ಷದ ಚುನಾವಣಾ ಪೂರ್ವ ಭಾವಿ ಸಭೆ ಉಡುಪಿ ಜಿಲ್ಲೆಯ ಪಕ್ಷ ಕಚೇರಿ ಕುಮಾರ ಕೃಪದಲ್ಲಿ ಬುಧವಾರ ಜರಗಿತು.

ಜಿಲ್ಲಾಧ್ಯಕ್ಷ ಯೋಗೀಶ್ ವಿ.ಶೆಟ್ಟಿ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯ ಬಗ್ಗೆ ಉಡುಪಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು  ಕಣಕ್ಕಿಳಿಸಿ ಸ್ಪರ್ಧಿಸಲಾಗುವುದು ಎಂದು ತಿಳಿಸಿದರು. ಚುನಾ ವಣಾ ಉಸ್ತುವಾರಿಗಳ ನೇಮಕಾತಿ ಪಟ್ಟಿ ಬಿಡುಗಡೆಗೊಳಿಸಿದರು.

ಬೈಂದೂರು:- ಶ್ರೀಕಾಂತ್ ಅಡಿಗ, ಶಾಲಿನಿ ಶೆಟ್ಟಿ ಕೆಂಚನೂರು, ಮನ್ಸೂರ್ ಇಬ್ರಾಹಿಂ, ನಿತಿನ್ ಶೆಟ್ಟಿ, ಗುರುರಾಜ ಶೆಟ್ಟಿ. ಕುಂದಾಪುರ: ಸುಧಾಕರ ಶೆಟ್ಟಿ, ಶ್ರೀಕಾಂತ ಅಡಿಗ, ಮನ್ಸೂರ್ ಇಬ್ರಾಹಿಂ, ರಮೇಶ್ ಕುಂದಾಪುರ. ಉಡುಪಿ: ಜಯಕುಮಾರ್ ಪರ್ಕಳ, ವಾಸುದೇವ ರಾವ್, ಗಂಗಾಧರ ಬಿರ್ತಿ, ದಕ್ಷತ್ ಶೆಟ್ಟಿ, ಸಂಜಯ್ ಕುಮಾರ್. ಕಾಪು: ಸುಧಾಕರ್ ಶೆಟ್ಟಿ, ಉದಯ ಹೆಗ್ಡೆ, ಉಮೇಶ್ ಕರ್ಕೆರ, ವಾಸುದೇವ ರಾವ್, ಚಂದ್ರಹಾಸ ಎರ್ಮಾಳ್, ಸಯ್ಯದ್ ಸಾಹಿದ್. ಕಾರ್ಕಳ: ಉದಯ ಹೆಗ್ಡೆ, ಜಯರಾಮ ಆಚಾರ್ಯ, ದಕ್ಷತ್ ಆರ್ ಶೆಟ್ಟಿ, ಉದಯ ಆರ್ ಶೆಟ್ಟಿ, ಇಸ್ಮಾಯಿಲ್ ಪಲಿಮಾರ್, ಅಬ್ದುಲ್ ರಝಾಕ್ ಉಚ್ಚಿಲ.

ಈ ಸಂದರ್ಭ  ಸುಧಾಕರ ಶೆಟ್ಟಿ, ಗಂಗಾಧರ ಬಿರ್ತಿ, ಮನ್ಸೂರ್ ಇಬ್ರಾಹಿಂ, ದಕ್ಷತ್ ಆರ್.ಶೆಟ್ಟಿ, ಬಾಲಕೃಷ್ಣ ಆಚಾರ್ಯ, ಇಕ್ಬಾಲ್ ಅತ್ರಾಡಿ, ಭರತ್ ಕುಮಾರ್ ಮತ್ತು ಇಸ್ಮಾಯಿಲ್ ಫಲಿಮಾರು, ವೆಂಕಟೇಶ್ ಎಂಟಿ, ಸಂಜಯ್ ಕುಮಾರ್, ಹುಸೇನ್ ಹೈಕಾಡಿ, ಫೈಜಾನ್ ಅಹಮ್ಮದ್, ರಾಮರಾವ್, ಬಿಕೆ ಹೆಜಮಾಡಿ, ದೇವರಾಜ್ ತೊಟ್ಟಂ, ಹರಿಣಿ ಆರ್.ಕೋಟ್ಯಾನ್, ಮೋಹಿನಿ, ಶಂಶುದ್ದಿನ್, ಪದ್ಮನಾಭ ಆರ್.ಕೋಟ್ಯಾನ್, ರಂಗ ಎನ್.ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಾಧ್ಯಕ್ಷ ವಾಸುದೇವ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಯಕ ಸಂಕಪ್ಪಎ. ಮಾತನಾಡಿದರು. ಇತ್ತೀಚೆಗೆ ನಿಧನರಾದ ಕಾಪು ವಿಧಾನ ಸಭಾ ಕ್ಷೇತ್ರದ ಕಾರ್ಯಾಧ್ಯಕ್ಷ ರಾಜು ಆರ್.ಪುತ್ರನ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಉದಯ ಶೆಟ್ಟಿ ವಂದಿಸಿದರು.

Similar News