ಕೊಕ್ಕರ್ಣೆ ರಿಕ್ಷಾ ಚಾಲಕರಿಗೆ ಖಾಕಿ ಶರ್ಟ್ ವಿತರಣೆ

Update: 2023-02-17 14:16 GMT

ಉಡುಪಿ: ಯಶೋದಾ ಆಟೋ ಚಾಲಕರ ಮತ್ತು ಮಾಲಕರ ಸಂಘದ ವತಿಯಿಂದ ಜಿಲ್ಲಾಧ್ಯಕ್ಷ ಕೆ.ಕೃಷ್ಣಮೂರ್ತಿ ಆಚಾರ್ಯ ನೇತೃತ್ವದಲ್ಲಿ ಗುರುವಾರ ಕೊಕ್ಕರ್ಣೆ ಆಟೋ ನಿಲ್ದಾಣದ ಚಾಲಕರಿಗೆ ಖಾಕಿ ವಸ್ತ್ರವನ್ನು ವಿತರಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಅಮೃತ ಕೃಷ್ಣಮೂರ್ತಿ, ಸುನಿಲ್ ಬೈಲಕೆರೆ, ತಾಲೂಕು ಅಧ್ಯಕ್ಷ ಉದಯ್ ಪಂದುಬೆಟ್ಟು, ಜಿಲ್ಲಾ ಜೊತೆ ಕಾರ್ಯ ದರ್ಶಿ ಹರೀಶ್ ಅಮೀನ್, ಜಿಲ್ಲಾ ಕೋಶಾಧಿಕಾರಿ ಶ್ರೀನಿವಾಸ್ ಕಪ್ಪೆಟು, ಕೊಕ್ಕರ್ಣೆ ಆಟೋ ನಿಲ್ದಾಣದ ಅಧ್ಯಕ್ಷ ಗಣೇಶ್ ಕೊಕ್ಕರ್ಣೆ ಉಪಸ್ಥಿತರಿದ್ದರು.

Similar News