ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Update: 2023-02-17 15:14 GMT

ಗಂಗೊಳ್ಳಿ : ವಿಪರೀತ ಮದ್ಯ ಸೇವನೆ ಚಟ ಹೊಂದಿದ್ದ ಆಲೂರು ಗ್ರಾಮದ ಗೋಳಿಕಟ್ಟೆಯ ಕೃಷಿಕ ಕುಶಾಲ ಶೆಟ್ಟಿ (53) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಫೆ.೧೬ರಂದು ಬೆಳಗ್ಗೆ ಮನೆಯ ತೋಟದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಶಿರ್ವ: ವಿಪರೀತವಾಗಿ ಕುಡಿತದ ಚಟವನ್ನು ಹೊಂದಿದ್ದ ಪಿಲಾರು ಗ್ರಾಮದ ಹಲಸಿನಕಟ್ಟೆಯ ವಾಸು ಪೂಜಾರಿ(62) ಎಂಬವರು ಅನಾರೋಗ್ಯದಿಂದ ಮನನೊಂದು ಫೆ.೧೬ರಂದು ರಾತ್ರಿ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News