ತೆಲುಗು ನಟ ನಂದಮೂರಿ ತಾರಕ ರತ್ನ ನಿಧನ

Update: 2023-02-18 16:50 GMT

ಬೆಂಗಳೂರು: ಕಳೆದ ಕೆಲ ದಿನಗಳಿಂದ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಂದಮೂರಿ ತಾರಕರತ್ನ (40) ವಿಧಿವಶರಾಗಿದ್ದಾರೆ. ಇದನ್ನು ಆಸ್ಪತ್ರೆ ಅಧಿಕಾರಿಗಳು ಅಧಿಕೃತವಾಗಿ ಖಚಿತಪಡಿಸಿದ್ದಾರೆ. 

ವಿದೇಶದಿಂದ ವಿಶೇಷ ವೈದ್ಯಕೀಯ ತಂಡ ನಾರಾಯಣ ಹೃದಯಾಲಯಕ್ಕೆ ಬಂದು ಬೆಂಗಳೂರಿನಲ್ಲಿ ತಾರಕರತ್ನ ಅವರಿಗೆ ಚಿಕಿತ್ಸೆ ನೀಡಿತ್ತು. ಆದರೆ ಯಾವುದೇ ಫಲ ಸಿಗಲಿಲ್ಲ. ಕೋಮಾ ಸ್ಥಿತಿಗೆ ತಲುಪಿದ್ದ ತಾರಕರತ್ನ ಅವರನ್ನು ರಕ್ಷಿಸಲು ವೈದ್ಯರ ಪ್ರಯತ್ನವೆಲ್ಲ ವಿಫಲವಾಯಿತು ಎಂದು news18 ವರದಿ ಮಾಡಿದೆ.

ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ನಂದಮೂರಿ ತಾರಕರತ್ನ ಕುಂಪಾದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಿ ನಂತರ ಬೆಂಗಳೂರು ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರಿಸಲಾಯಿತು. ಅಂದಿನಿಂದ ಚಿಕಿತ್ಸೆ ಮುಂದುವರಿದಿತ್ತು.

Similar News