ಹಾಥರಸ್ ‘ಪಿತೂರಿ’ ಪ್ರಕರಣ: ಅತೀಕ್-ಉರ್-ರೆಹ್ಮಾನ್‌ಗೆ ಜಾಮೀನು

Update: 2023-03-15 18:11 GMT

ಮುಂಬೈ, ಮಾ. 15: ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆಗೀಡಾದ ದಲಿತ ಯುವತಿಯ ಕುಟುಂಬವನ್ನು ಭೇಟಿಯಾಗಲು ಪತ್ರಕರ್ತ ಸಿದ್ದೀಕ್ ಕಪ್ಪನ್ ಹಾಗೂ ಇತರ ಇಬ್ಬರೊಂದಿಗೆ ಹಾಥರಸ್‌ಗೆ ತೆರಳುತ್ತಿದ್ದಾಗ ಬಂಧನಕ್ಕೊಳಗಾದ ‘‘ಹಾಥರಸ್ ಪಿತೂರಿ’’ ಪ್ರಕರಣದ ಆರೋಪಿ ಅತೀಕ್-ಉರ್- ರೆಹ್ಮಾನ್‌ಗೆ ಅಲಹಾಬಾದ್ ಉಚ್ಚ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ.

ರೆಹ್ಮಾನ್ ಕಳೆದ 2 ವರ್ಷಗಳಿಂದ ಜೈಲಿನಲ್ಲಿದ್ದಾರೆ. ಪ್ರಕರಣದ ಇತರ ಆರೋಪಿಗಳಾದ ಸಿದ್ದೀಕ್ ಕಪ್ಪನ್ ಹಾಗೂ ಮುಹಮ್ಮದ್ ಆಲಂ ಈಗಾಗಲೇ ಉಚ್ಚ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದಾರೆ ಎಂಬ ಅಂಶವನ್ನು ನ್ಯಾಯಮೂರ್ತಿಗಳಾದ ಅತ್ತೌ ರೆಹ್ಮಾನ್ ಮಸೂದಿ ಹಾಗೂ ರೇಣು ಅಗರ್ವಾಲ್ ಅವರ ಪೀಠ ಗಣನೆಗೆ ತೆಗೆದುಕೊಂಡಿತು.

ಆದರೆ, ರೆಹ್ಮಾನ್ ಅವರ ವಿರುದ್ಧ ಪಿಎಂಎಲ್‌ಎ ಪ್ರಕರಣ ಬಾಕಿ ಉಳಿದಿರುವುದರಿಂದ ಅವರು ಜೈಲಿನಲ್ಲೇ ಇರಲಿದ್ದಾರೆ.

Similar News