ರಜನಿಕಾಂತ್ ಪುತ್ರಿಯ ನಿವಾಸದಿಂದ ಚಿನ್ನಾಭರಣ ನಾಪತ್ತೆ: ಪ್ರಕರಣ ದಾಖಲು

Update: 2023-03-20 08:00 GMT

ಚೆನ್ನೈ: ನನ್ನ ನಿವಾಸದಿಂದ ಚಿನ್ನ ಮತ್ತು ವಜ್ರಾಭರಣಗಳು ಕಳವಾಗಿವೆ ಎಂದು ಹಿರಿಯ ನಟ ರಜನಿಕಾಂತ್ ಅವರ ಪುತ್ರಿ ಐಶ್ವರ್ಯ (Aishwarya) ಚೆನ್ನೈನ ಟೀನಾ ಪೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಫೆಬ್ರವರಿ 27ರಂದು ಈ ಸಂಬಂಧ ದೂರು ದಾಖಲಿಸಿರುವ ಐಶ್ವರ್ಯ, "ನನ್ನ ಲಾಕರ್‌ನಿಂದ ಬೆಲೆ ಬಾಳುವ ಹಲವಾರು ಚಿನ್ನಾಭರಣಗಳು ಕಳವಾಗಿವೆ. ಈ ಘಟನೆಯು ಫೆಬ್ರವರಿ 10ರಂದು ನನ್ನ ಗಮನಕ್ಕೆ ಬಂದಿತು" ಎಂದು ಹೇಳಿದ್ದಾರೆ.

ಕಳವಿನ ಬಗ್ಗೆ ನನಗೆ ನನ್ನ ಚಾಲಕ ಹಾಗೂ ಇಬ್ಬರು ಮನೆಗೆಲಸದವರ ಬಗ್ಗೆ ಸಂಶಯವಿದೆ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಪ್ರಕಾರ, ಕಳವಾಗಿರುವ ಚಿನ್ನಾಭರಣಗಳ ಮೌಲ್ಯ ರೂ. 3,60,000 ಎಂದು ಅಂದಾಜಿಸಲಾಗಿದೆ.

"ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಳವಾಗಿರುವ ಬೆಲೆ ಬಾಳುವ ಆಭರಣಗಳನ್ನು ವಶಪಡಿಸಿಕೊಳ್ಳಬೇಕು ಹಾಗೂ ಅಗತ್ಯವಿರುವ ಕಾನೂನು ಕ್ರಮವನ್ನು ಜರುಗಿಸಬೇಕು ಎಂದು ಮನವಿ ಮಾಡುತ್ತೇನೆ" ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಐಶ್ವರ್ಯ ಕೋರಿದ್ದಾರೆ.

ಘಟನೆಯ ಕುರಿತು ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಂಡಿರುವ ಪೊಲೀಸರು, ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಸ್ವಘೋಷಿತ ದೇವಮಾನವ ಧೀರೇಂದ್ರ ಕೃಷ್ಣ ಕಾರ್ಯಕ್ರಮದಲ್ಲಿ 36 ಮಂದಿಯ ಚಿನ್ನಾಭರಣ ಕಳವು

Similar News