ಉಡುಪಿ: ಗಾಂಜಾ ಸೇವನೆ ಆರೋಪ; ಮೂವರು ವಶಕ್ಕೆ

Update: 2023-03-20 15:35 GMT

ಉಡುಪಿ, ಮಾ.20: ಗಾಂಜಾ ಸೇವನೆಗೆ ಸಂಬಂಧಿಸಿ ಮಾ.17ರಂದು ಉಡುಪಿ ಸೆನ್ ಪೊಲೀಸರು ಮಣಿಪಾಲ ಉಪೇಂದ್ರ ಪೈ ಸರ್ಕಲ್ ಬಳಿ ಆದಿತ್ಯ ವಿನೋದ್ ಶರಫ್ ಹಾಗೂ ಜೈದೀಪ್ ಯಲವರ್ತಿ ಎಂಬವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕುಂದಾಪುರ: ಗಾಂಜಾ ಸೇವನೆಗೆ ಸಂಬಂಧಿಸಿ ಮಾ.19ರಂದು ಉಪ್ಪಿನಕುದ್ರು ಗ್ರಾಮದ ಬಾಳೆಬೆಟ್ಟು ಬಳಿ ಶ್ರೀಪಾದ(19) ಎಂಬಾತನನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Similar News