ಮಂಗಳೂರು:‌ ರಾಹುಲ್ ಗಾಂಧಿ ವಿರುದ್ಧ ತೀರ್ಪು ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

Update: 2023-03-23 14:13 GMT

ಮಂಗಳೂರು: ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ವಿರುದ್ಧ ಸೂರತ್ ನ್ಯಾಯಾಲಯವು ನೀಡಿದ ತೀರ್ಪುನ್ನು ಖಂಡಿಸಿ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯು ಗುರುವಾರ ನಗರದ ಮಲ್ಲಿಕಟ್ಟೆಯಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿತು.

ಬಿಜೆಪಿ ಸರಕಾರವುಯ ಆಡಳಿತ ಯಂತ್ರವನ್ನು  ದುರುಪಯೋಗಪಡಿಸಿ ರಾಹುಲ್ ಗಾಂಧಿಯ ಧ್ವನಿಯನ್ನು ಹತ್ತಿಕ್ಕಲು ಯತ್ನಿಸುತ್ತಿದೆ. 2019ರ ಲೋಕಸಭಾ ಚುನಾವಣಾ ಭಾಷಣದಲ್ಲಿ ರಾಹುಲ್ ಗಾಂಧಿ ದೇಶದಲ್ಲಿ ನಡೆಯು ತ್ತಿರುವ ವಿದ್ಯಮಾನದ ಬಗ್ಗೆ ಕುರಿತು ಮಾತನಾಡಿದ್ದಾರೆ. ಪ್ರಧಾನಿ ಹೆಸರನ್ನು ಉಲ್ಲೇಖಿಸದೆ ನೀರವ್ ಮೋದಿ, ಲಲಿತ್ ಮೋದಿ ಭ್ರಷ್ಟಾಚಾರದ ಬಗ್ಗೆ ದನಿ ಎತ್ತಿದ್ದರು. ಆದರೆ ಬಿಜೆಪಿ ಸರಕಾರವು ರಾಹುಲ್ ಗಾಂಧಿಯ ವಿರುದ್ಧ ಷಡ್ಯಂತರ ರೂಪಿಸಿದೆ ಎಂದು ಆರೋಪಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ಮೋದಿಯ ಭಾವಚಿತ್ರ ವನ್ನು ಒಳಗೊಂಡ ಭಿತ್ತಿಪತ್ರಕ್ಕೆ  ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ನಾಸೀರ್ ಸಾಮಣಿಗೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ರಮಾನಂದ ಪೂಜಾರಿ, ಇಸ್ಮಾಯೀಲ್ ಬಿ.ಎಸ್, ಫಯಾಝ್ ಅಮ್ಮೆಮ್ಮಾರ್, ಸಾಮಾಜಿಕ ಜಾಲತಾಣ ಗಳ ರಾಜ್ಯ ಸಂಯೋಜಕ ಸುಹಾನ್ ಎಸ್.ಕೆ, ಜಿಲ್ಲಾ ಕಾರ್ಯದರ್ಶಿ ಮಾಲ್ಕೊಂ ಡಿಸೋಜ, ಮಹೇಶ್ ಕೊಂಚಾಡಿ, ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಹಾನ್ ಆಳ್ವ, ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಸಮರ್ಥ್ ಭಟ್, ಶಾಹಿಲ್ ಎಕೆ, ರಶೀದ್ ಉಳ್ಳಾಲ, ಅಲ್ತಾಫ್ ದೇರಳಕಟ್ಟೆ, ಶಿಯಾಝ್, ನಿಯಾಝ್, ರಾಜ್, ಪ್ರಕಾಶ್ ಉಪಸ್ಥಿತರಿದ್ದರು.

Similar News