×
Ad

ಕ್ರೀಸ್ ತೊರೆದಿದ್ದ ಶಿಖರ್ ಧವನ್, ರನೌಟ್ ಮಾಡದ ಅಶ್ವಿನ್: ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

Update: 2023-04-06 12:30 IST

ಗುವಾಹಟಿ: ರಾಜಸ್ಥಾನ  ರಾಯಲ್ಸ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಬೌಲಿಂಗ್ ಮಾಡುವ ಮೊದಲೇ  ನಾನ್ ಸ್ಟ್ರೈಕ್ ನಲ್ಲಿ ಕ್ರೀಸ್ ಬಿಟ್ಟು ಮುಂದೆ ಹೋಗಿದ್ದ  ಪಂಜಾಬ್ ಕಿಂಗ್ಸ್  ನಾಯಕ ಶಿಖರ್ ಧವನ್  ಅವರನ್ನು ರನೌಟ್ ಮಾಡದೆ ಎಚ್ಚರಿಕೆ ನೀಡಿದರು.  ಈ ಹಿಂದೆ  ಜೋಸ್ ಬಟ್ಲರ್ ಅವರನ್ನು ನಾನ್ ಸ್ಟ್ರೈಕರ್  ಎಂಡ್ ನಲ್ಲಿ  ಬೇಗನೆ ಕ್ರೀಸ್ ತೊರೆದಿದ್ದಕ್ಕಾಗಿ ಅಶ್ವಿನ್ ಔಟ್ ಮಾಡಿದ್ದರು. ಆ ಘಟನೆಯು ಈಗ  ಅಭಿಮಾನಿಗಳಿಗೆ ನೆನಪಿಸಿತು.  

ಐಪಿಎಲ್  2019 ರ ಸಮಯದಲ್ಲಿ, ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದ ಅಶ್ವಿನ್  ಅವರು ಬಟ್ಲರ್ ಅವರನ್ನು ನಾನ್-ಸ್ಟ್ರೈಕರ್ ಕೊನೆಯಲ್ಲಿ ರನ್ ಔಟ್  ಮಾಡಿದ್ದರು. ಇದು ಕ್ರೀಡಾ ಸ್ಫೂರ್ತಿಗೆ ವಿರುದ್ಧ ಎಂಬ ಚರ್ಚೆಗೆ ಗ್ರಾಸವಾಗಿತ್ತು.  

ನಾನ್ ಸ್ಟ್ರೈಕ್ ಬಿಟ್ಟು ಮುಂದೆ ಹೋಗಿದ್ದಕ್ಕೆ ಅಶ್ವಿನ್ ರಿಂದ ಈ ಹಿಂದೆ ರನೌಟಾಗಿದ್ದ ಜೋಸ್ ಬಟ್ಲರ್ ಈಗ   ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಅಶ್ವಿನ್ ಸಹ ಆಟಗಾರನಾಗಿದ್ದಾರೆ.  ಬಟ್ಲರ್ ಮುಖಕ್ಕೆ  ಕ್ಯಾಮರಾ ಹಿಡಿಯುವ ಮೂಲಕ ಹಿಂದಿನ ಘಟನೆಯನ್ನು ನೆನಪಿಸಲಾಯಿತು.  

ಪಂಜಾಬ್ ಕಿಂಗ್ಸ್ ಇನಿಂಗ್ಸ್‌ನ ಏಳನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಈ ಘಟನೆ ನಡೆದಿದೆ. 

 ಕ್ರಿಕೆಟ್ ಅಭಿಮಾನಿಗಳು ಟ್ವಿಟರ್ ನಲ್ಲಿ  ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಘಟನೆಯ ಕುರಿತಾಗಿ ಜಾಲತಾಣದಲ್ಲಿ ಹೆಚ್ಚು ಮೀಮ್ ಗಳು ಹರಿದಾಡುತ್ತಿವೆ.

ಪಂಜಾಬ್ ತಂಡವು ರಾಜಸ್ಥಾನವನ್ನು 5 ರನ್ ನಿಂದ ರೋಚಕವಾಗಿ ಮಣಿಸಿದೆ.

Similar News