ಹಿರಿಯರನ್ನು ಭೇಟಿ ಮಾಡಿ ಸಲಹೆ, ಸೂಚನೆಗಳನ್ನು ಪಡೆದ ಶಾಸಕ ಯು.ಟಿ. ಖಾದರ್‌

Update: 2023-05-17 17:29 GMT

ಮಂಗಳೂರು : ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ ಅವರನ್ನು ಶಾಸಕ ಯು.ಟಿ. ಖಾದರ್‌ ಅವರು ಭೇಟಿ ಮಾಡಿ ಸಲಹೆ, ಸೂಚನೆಗಳನ್ನು ಪಡೆದರು.

ನಂತರ ಮಾತನಾಡಿದ ಯು.ಟಿ. ಖಾದರ್‌ ಅವರು ಕೇಂದ್ರದ ಮಾಜಿ ಸಚಿವರೂ, ನನ್ನ ಮಾರ್ಗದರ್ಶಕರೂ ಆದ ಬಿ. ಜನಾರ್ದನ ಪೂಜಾರಿ ಅವರನ್ನು ಭೇಟಿ ಮಾಡಿ ಸಲಹೆ, ಸೂಚನೆ, ಆಶೀರ್ವಾದ ಪಡೆದುದಾಗಿ ತಿಳಿಸಿದರು.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅಲ್ ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಅವರನ್ನೂ ಭೇಟಿಯಾದರು.

ಯು ಟಿ ಖಾದರ್ ರನ್ನು ಆತ್ಮೀಯವಾಗಿ ಬರಮಾಡಿಕೊಂಡ ಕೆ ಎಸ್ ಮಸೂದ್ ಹರಸಿ, ಹಾರೈಸಿದರು. ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಸಲಹೆ ಸೂಚನೆಗಳನ್ನು ನೀಡಿದರು.

ಕ್ರೈಸ್ತ ಧರ್ಮದ ಮಂಗಳೂರು ಪ್ರಾಂತ್ಯದ ಧರ್ಮಗುರುಗಳಾದ ಬಿಷಪ್‌ ರೆ. ಡಾ. ಪೀಟರ್‌ ಪಾವ್ಲ್‌ ಸಲ್ದಾನ ಅವರನ್ನು ಭೇಟಿಯಾಗಿ ಸಲಹೆ ಸೂಚನೆಗಳನ್ನು ಪಡೆದಿರುವುದಾಗಿ ಯುಟಿ ಖಾದರ್‌ ಅವರು ತಿಳಿಸಿದ್ದಾರೆ.

Similar News