‘ಶನಿ ಹಿಡಿದವ’ -‘ಬಲ್ಲಿರೇನಯ್ಯ’ ಪುಸ್ತಕಗಳ ಬಿಡುಗಡೆ

Update: 2023-05-27 14:54 GMT

ಉಡುಪಿ: ಸುಹಾಸಂ ಉಡುಪಿ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಮತ್ತು ಉಡುಪಿ ತಾಲೂಕು ಘಟಕಗಳ ಸಂಯುಕ್ತ ಆಶ್ರಯದಲ್ಲಿ  ಕು.ಗೋ. ಅವರ ‘ಶನಿ ಹಿಡಿದವ’ ಇಂಗ್ಲಿಷ್ ಕಥಾಸಂಕಲನ ಮತ್ತು ದಿನೇಶ್ ಉಪ್ಪೂರ್ ಅವರ ಯಕ್ಷಗಾನದ ಸ್ವಾರಸ್ಯಗಳು ‘ಬಲ್ಲಿರೇನಯ್ಯ’ ಪುಸ್ತಕ ಬಿಡುಗಡೆ ಸಮಾರಂಭವು ಶನಿವಾರ ಉಡುಪಿ ಕಿದಿಯೂರು ಹೊಟೇಲ್ ಸಭಾಂಗಣದಲ್ಲಿ ಜರಗಿತು.

ಕೃತಿಗಳನ್ನು ಬಿಡುಗಡೆಗೊಳಿಸಿ ‘ಶನಿಹಿಡಿದವ’ ಕೃತಿಯ ಪರಿಚಯ ಮಾಡಿದ ಸಾಹಿತಿ ಸತ್ಯೇಶ್ ಎನ್.ಬೆಳ್ಳೂರು, ಕಥೆಗಳು ಓದುಗರ ಮನಸ್ಸನ್ನು ತಣಿಸುವ ಕಾರ್ಯ ಮಾಡುತ್ತವೆ. ಕಥೆ ಎಂಬುದು ಓದುಗನ ತಲೆಯಲ್ಲಿ ಹತ್ತಾರು ಪ್ರಶ್ನೆ ಗಳನ್ನು ಮೂಡಿಸಬೇಕು. ಕಥೆ ಓದಿ ಮುಗಿಸಿದ ಬಳಿಕವೂ ಚಿಂತನೆಗೆ ಹಚ್ಚು ವಂತೆ ಮಾಡಬೇಕು ಎಂದು ತಿಳಿಸಿದರು.

ಅನುವಾದಕಿ ಡಾ.ಕುಸುಮಾ ತಂತ್ರಿ, ಲೇಖಕರಾದ ಕು.ಗೋ, ದಿನೇಶ್ ಉಪ್ಪೂರ ಉಪಸ್ಥಿತರಿದ್ದರು. ಅಧ್ಯಕ್ಷತೆ ಯನ್ನು ಸುಹಾಸಂ ಅಧ್ಯಕ್ಷ ಎಚ್. ಶಾಂತರಾಜ್ ಐತಾಳ್ ವಹಿಸಿದ್ದರು. ಬಲ್ಲಿರೇನಯ್ಯ ಕೃತಿಯನ್ನು ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಎಚ್.ಶ್ರೀಧರ ಹಂದೆ ಮಾಡಿದರು.

ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಸ್ವಾಗತಿಸಿದರು. ಶ್ರೀನಿವಾಸ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು.

Similar News