ಮಟ್ಕಾ ಜುಗಾರಿ: ಆರು ಮಂದಿ ವಶಕ್ಕೆ

Update: 2023-05-28 15:49 GMT

ಉಡುಪಿ, ಮೇ 28: ಮಟ್ಕಾ ಜುಗಾರಿಗೆ ಸಂಬಂಧಿಸಿ ಮೇ 27ರಂದು ವಿವಿಧೆಡೆ ದಾಳಿ ನಡೆಸಿದ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚಿಟ್ಪಾಡಿ ಡಯಾನ ಟಾಕೀಸ್ ಬಳಿ ನಾಗೇಶ್, ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಕಟಪಾಡಿ ಹಳೆಯ ಮೀನುಮಾರುಕಟ್ಟೆ ಬಳಿ ರವಿ ಪೂಜಾರಿ (50) ಮತ್ತು ಕಾಪು ಪೇಟೆಯ ಕೆ.ವಿ.ಕೆ. ತರಕಾರಿ ಅಂಗಡಿ ಬಳಿ ಪಡುಬಿದ್ರೆಯ ಶ್ರೀನಿವಾಸ(35), ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಬ್ರಹ್ಮಾವರ ಪೇಟೆಯ ಕುಂಜಾಲು ಕ್ರಾಸ್‌ನಲ್ಲಿ ರತ್ನರಾಜ್, ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಸಾಸ್ತಾನ ಗೋಳಿಗರಡಿ ರಸ್ತೆಯಲ್ಲಿರುವ ಗೂಡು ಅಂಗಡಿಯ ಬಳಿ ಮಹಾಬಲ ಪೂಜಾರಿ, ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರೂರು ಗ್ರಾಮದ ಹಡವಿನಕೋಣೆ ಎಂಬಲ್ಲಿ ಪಾಂಡುರಂಗ ಮೇಸ್ತ ಎಂಬವರನ್ನು ವಶಕ್ಕೆ ಪಡೆದು, ಒಟ್ಟು 8205ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.

Similar News