ಕುಸ್ತಿಪಟುಗಳ ಪ್ರತಿಭಟನೆ: ದಿಲ್ಲಿ ಪ್ರವೇಶಿಸಲು ರೈತರಿಗೆ ನಿರ್ಬಂಧ

Update: 2023-05-28 17:27 GMT

ಹೊಸದಿಲ್ಲಿ, ಮೇ 28: ನೂತನ ಸಂಸತ್ ಭವನದ ಹೊರಗೆ ಪ್ರತಿಭಟನೆಗೆ  ಕುಸ್ತಿಪಟುಗಳು ಕರೆ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ದಿಲ್ಲಿ ಪ್ರವೇಶಿಸಲು ಬಯಸಿದ  ಭಾರತೀಯ ಕಿಸಾನ್ ಒಕ್ಕೂಟ (BKU)ದ ನಾಯಕ ರಾಕೇಶ್ ಟೀಕಾಯತ್ ನೇತೃತ್ವದ ರೈತರನ್ನು ದಿಲ್ಲಿ ಪೊಲೀಸರು ಗಾಝಿಯಾಬಾದ್ ಗಡಿಯಲ್ಲಿ ರವಿವಾರ ತಡೆದಿದ್ದಾರೆ.

‘‘ಎಲ್ಲರನ್ನು (ರೈತರು) ತಡೆದು ನಿಲ್ಲಿಸಿದರು (Police). ನಾವು ಸದ್ಯಕ್ಕೆ ಇಲ್ಲಿ ಕುಳಿತುಕೊಳ್ಳುತ್ತೇವೆ. ಮುಂದೆ ಏನು ಮಾಡಬೇಕು ಎಂದು ನಿರ್ಧರಿಸುತ್ತೇವೆ’’ ಎಂದು ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದ ನಾಯಕತ್ವ ವಹಿಸಿದ್ದ ರಾಕೇಶ್ ಟಿಕಾಯತ್ ಅವರು ಹೇಳಿದ್ದಾರೆ. 

ಈ ಸಂದರ್ಭ ಭಾರೀ ಪೊಲೀಸ್ ಭದ್ರತೆಯ ನಡುವೆಯೂ ಬ್ಯಾರಿಕೇಡ್‌ಗಳನ್ನು ಬೇಧಿಸಿ ದಿಲ್ಲಿ ಪ್ರವೇಶಿಸಲು ಯತ್ನಿಸಿದ ರೈತರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ತೀವ್ರ ವಾಗ್ವಾದ ನಡೆಯಿತು. ರೈತರು ದಿಲ್ಲಿ ಪ್ರವೇಶಿಸುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಗಾಝಿಯಾಬಾದ್ ಗಡಿಯನ್ನು ಮುಚ್ಚಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Similar News