ಪ್ರತಿಭಟನಾನಿರತ ಕುಸ್ತಿಪಟುಗಳಿಗೆ ಅನಿಲ್ ಕುಂಬ್ಳೆ ಬೆಂಬಲ

Update: 2023-05-30 13:58 GMT

ಹೊಸದಿಲ್ಲಿ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತ ಕುಸ್ತಿ ಫೆಡರೇಶನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಸಿಂಗ್ ನನ್ನು ಬಂಧಿಸಬೇಕೆಂದು ಆಗ್ರಹಿಸಿ ಧರಣಿ ನಡೆಸುತ್ತಿರುವ  ಕುಸ್ತಿಪಟುಗಳಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಮಂಗಳವಾರ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮೇ 28ರಂದು ನಮ್ಮ ಕುಸ್ತಿಪಟುಗಳ ಮೇಲೆ ನಡೆದಿರುವ ಹಲ್ಲೆಯ ವಿಚಾರ ಕೇಳಿ ಬೇಸರವಾಯಿತು. ಸರಿಯಾದ ಮಾತುಕತೆಯ ಮೂಲಕ ಇದನ್ನು ಬಗೆಹರಿಸುವ ವಿಶ್ವಾಸ ಇದೆ. ಇದು ಆದಷ್ಟು ಬೇಗನೆ ಪರಿಹಾರವಾಗಬಹುದೆಂಬ ನಿರೀಕ್ಷೆಯಲ್ಲಿರುವೆ ಎಂದು ಅನಿಲ್ ಕುಂಬ್ಳೆ ಟ್ವೀಟ್ ಮಾಡಿದ್ದಾರೆ.

ತಾವು ಕಷ್ಟಪಟ್ಟು ಗೆದ್ದುಕೊಂಡಿರುವ ಪದಕಗಳನ್ನು ಉತ್ತರಾಖಂಡದ ಹರಿದ್ವಾರ ನಗರದ ಗಂಗಾ ನದಿಯಲ್ಲಿ ಎಸೆಯಲು ನಿರ್ಧರಿಸಿ ಮಂಗಳವಾರ ಸಂಜೆ ಅಲ್ಲಿಗೆ ತೆರಳಿರುವ ಕುಸ್ತಿಪಟುಗಳು, ಆ ನಂತರ ಹೊಸದಿಲ್ಲಿಯ ಇಂಡಿಯಾ ಗೇಟ್ ನಲ್ಲಿ ಆಮರಣಾಂತ ಉಪವಾಸ ಕೈಗೊಳ್ಳಲು ತೀರ್ಮಾನಿಸಿದ್ದಾರೆ.

Similar News