ಒಡಿಶಾ ರೈಲು ದುರಂತವನ್ನು ಮೀಸಲಾತಿ ವಿರೋಧಿಸಲು ಬಳಸಿದ ಬಲಪಂಥೀಯರು !

Update: 2023-06-03 14:32 GMT

ಹೊಸದಿಲ್ಲಿ: ಒಡಿಶಾ ರೈಲು ದುರಂತವನ್ನು ಮುಂದಿಟ್ಟುಕೊಂಡು ಸಾಮಾಜಿಕ ಪ್ರಾತಿನಿಧ್ಯ ಉದ್ದೇಶಕ್ಕೆ ಪ್ರಾರಂಭಿಸಲಾದ ಮೀಸಲಾತಿಯನ್ನು ಹಲವು ಬಲಪಂಥೀಯರು ವಿರೋಧಿಸಿದ್ದಾರೆ. ಮೀಸಲಾತಿಯಿಂದ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗವನ್ನು ನೀಡದೆ ಕಡಿಮೆ ಅಂಕ ಗಳಿಸಿದವರಿಗೂ ನೀಡಲಾಗುತ್ತದೆ. ಹಾಗಾಗಿ ಒಡಿಶಾ ರೈಲು ದುರಂತದಂತಹ ಪ್ರಕರಣ ಜರುಗುತ್ತವೆ ಎಂದು ಮೀಸಲಾತಿ ವಿರೋಧಿಗಳು ಪ್ರಚಾರ ಮಾಡುತ್ತಿದ್ದಾರೆ.

70% ಸಿಬ್ಬಂದಿ ಕೋಟಾದಿಂದ (ಮೀಸಲಾತಿ) ಬಂದವರು ಇರುವವರೆಗೆ ಈ ರೀತಿಯ ಅಪಘಾತಗಳು ಎಂದಿಗೂ ನಿಲ್ಲುವುದಿಲ್ಲ. ನೀವು ಕಡಿಮೆ ಅರ್ಹತೆ ಹೊಂದಿರುವವರನ್ನು ನೇಮಿಸುವುದರಿಂದ ಪ್ರತಿಭಾವಂತ ಮತ್ತು ಬುದ್ಧಿವಂತ ಜನರು ಬದಿಗೆ ಸರಿಯುತ್ತಾರೆ, ನೀವು ಸ್ವಇಚ್ಛೆಯಿಂದ ಆಹ್ವಾನಿಸುತ್ತಿದ್ದೀರಿ ಮತ್ತು ಸಮಸ್ಯೆಯನ್ನು ಸೃಷ್ಟಿಸುತ್ತಿದ್ದೀರಿ ಮತ್ತು ಜನರ ಜೀವನದೊಂದಿಗೆ ಆಟವಾಡುತ್ತಿದ್ದೀರಿ ಎಂದು ರೈಲು ಅಪಘಾತದ ಸುದ್ದಿಗೆ ಆದಿತ್ಯ ಎಂಬವರು ಟ್ವೀಟ್ ಮಾಡಿದ್ದಾರೆ.

ಅನೂಲಕರ ಜಾತಿಯಲ್ಲಿ ಹುಟ್ಟಿದ ಮಂದಿ ಮೀಸಲಾತಿಯನ್ನು ವಿರೋಧಿಸಲು ಕಾರಣ ಹುಡುಕುತ್ತಿರುತ್ತಾರೆ. ಇಂತಹ ದುರಂತಗಳನ್ನು ಬಳಸುತ್ತಾರೆ ಎಂದು ಮೀಸಲಾತಿ ವಿರೋಧಿಸುವವರನ್ನು ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಒಡಿಶಾ ರೈಲು ಅಪಘಾತದಲ್ಲಿ ಸಾವನ್ನಪ್ಪಿದ 250 ಕ್ಕೂ ಹೆಚ್ಚು ಜನರ ಬಗ್ಗೆ ಈ ಜಾತಿವಾದಿ ಜನರಿಗೆ ಯಾವುದೇ ಅನುಕಂಪವಿಲ್ಲ. ಆದರೆ ಮೀಸಲಾತಿಯನ್ನು ದೂಷಿಸಲು ಮತ್ತು ತಮ್ಮದೇ ಜಾತಿಯ ಅಸಮರ್ಥ ಮಂತ್ರಿಯನ್ನು ರಕ್ಷಿಸಲು ಅವರು ಎಂದಿಗೂ ಮರೆಯುವುದಿಲ್ಲ ಎಂದು ನೆಟ್ಟಿಗರೊಬ್ಬರು ಟೀಕಿಸಿದ್ದಾರೆ.

ಒಡಿಶಾ ರೈಲು ಅಪಘಾತಕ್ಕೆ ರೈಲ್ವೆಯ ಮೀಸಲಾತಿ ನೀತಿಯೇ ಕಾರಣ ಎಂದು ಗೋಮೂತ್ರ ಕುಡಿಯುವ ಬ್ರಾಹ್ಮಣರು ಹೇಳುತ್ತಿದ್ದಾರೆ ಎಂದು ಸುಶೀಲ್ ಶಿಂಧೆ ಎಂಬವರು ಟ್ವೀಟ್ ಮಾಡಿದ್ದಾರೆ

Similar News