ಕುಂದಾಪುರ: ವಿಶ್ವ ಪರಿಸರ ದಿನದ ಜಾಥಾಕ್ಕೆ ಚಾಲನೆ

Update: 2023-06-05 15:23 GMT

ಕುಂದಾಪುರ: ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು ಮತ್ತು ಕುಂದಾಪುರ ಪುರಸಭೆಯ ಜಂಟಿ ಆಶ್ರಯ ದಲ್ಲಿ ವಿಶ್ವ ಪರಿಸರ ದಿನದ ಜಾಥಾವನ್ನು ಸೋಮವಾರ ಕುಂದಾಪುರ ಪುರಸಭೆಯ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಜಾಥಾಕ್ಕೆ ಬ್ಯಾರೀಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರಹ್ಮಾನ್ ಚಾಲನೆ ನೀಡಿ, ಜೀವ ಜಗತ್ತಿನಲ್ಲಿ ಯಾವುದೇ ಜೀವಿಗಳಿಂದಲೂ ಪರಿಸರ ನಾಶವಾಗುತ್ತಿಲ್ಲ. ಬುದ್ದಿಜೀವಿ ಮಾನವ ಸ್ವಾರ್ಥ ಪರವಾಗಿ ಸುಂದರ ಪರಿಸರವನ್ನು ನಾಶಗೊಳಿಸುವುದರೊಂದಿಗೆ ಜೀವ ಜಗತ್ತಿಗೆ ಆಪತ್ತಾಗಿದ್ದಾನೆ ಎಂದು ತಿಳಿಸಿದರು.

ಜಾಥಾದಲ್ಲಿ ಪುರಸಭಾ ಮುಖ್ಯಾಧಿಕಾರಿ ಮಂಜುನಾಥ್, ಬ್ಯಾರೀಸ್ ಶಿಕ್ಷಣ ಸಂಸ್ಥೆಗಳ ಸಂಯೋಜಕ ಪ್ರೊ.ಆಕಾಶ್, ಕುಂದಾಪುರ ಪುರಸಭಾ ಪರಿಸರ ಅಭಿಯಂತರ ಗುರುಪ್ರಸಾದ್, ಆರೋಗ್ಯಾಧಿಕಾರಿ ಡಾ.ರಾಘವೇಂದ್ರ ಹಾಗೂ ಸಿಬ್ಬಂದಿ ವರ್ಗ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಫಿರ್ದೋಸ್, ಡಾ. ಶಮೀರ್, ಡಾ.ಸುರೇಶ್ ಶೆಟ್ಟಿ, ಜಯಶೀಲ ಶೆಟ್ಟಿ, ಬೋಧಕ  ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜಾಥವು ಕುಂದಾಪುರದ ಕೇಂದ್ರ ಭಾಗ ಪಾರಿಜಾತ ಸರ್ಕಲ್‌ನಿಂದ ಜಾಥಾ ಆರಂಭವಾಗಿ ಶಿಸ್ತಿನೊಂದಿಗೆ ಪರಿಸರ ಜಾಗೃತಿಯ ಘೋಷಣೆಗಳೊಂದಿಗೆ ಶಾಸ್ತ್ರಿ ಸರ್ಕಲ್‌ವರೆಗೆ ಸಾಗಿತು. 

Similar News