ಆಹಾರ ನಿಗಮದ ಕಂಪೌಂಡ್ ಗೋಡೆ ಹಾನಿ: ದೂರು

Update: 2023-06-05 15:46 GMT

ಮಣಿಪಾಲ, ಜೂ.5: ಗುಂಪೊಂದು ಪೆರಂಪಳ್ಳಿಯಲ್ಲಿರುವ ಭಾರತೀಯ ಆಹಾರ ನಿಗಮದ ಕಂಪೌಂಡು ಗೋಡೆ ಕೆಡವಿ ಲಕ್ಷಾಂತರ ರೂ. ನಷ್ಟ ಉಂಟು ಮಾಡಿರುವ ಘಟನೆ ಜೂ.3ರಂದು ರಾತ್ರಿ 9:45ರ ಸುಮಾರಿಗೆ ನಡೆದಿದೆ.

ಪೆರಂಪಳ್ಳಿಯಲ್ಲಿರುವ ಭಾರತೀಯ ಆಹಾರ ನಿಗಮದ ಸ್ಥಳಕ್ಕೆ 50ರಿಂದ 70 ಅಪರಿಚಿತರು ಅಕ್ರಮ ಕೂಟ ಸೇರಿಕೊಂಡು ಜೆಸಿಬಿ ವಾಹನದೊಂದಿಗೆ ಅಕ್ರಮ ಪ್ರವೇಶ ಮಾಡಿದ್ದು, ಸಂಸ್ಥೆಗೆ ಸಂಬಂದಿಸಿದ ಜಾಗದಲ್ಲಿದ್ದ ಸುಮಾರು 70 ಅಡಿ ಕಂಪೌಂಡ್ ಗೋಡೆಯನ್ನು ಕೆಡವಿ ಹಾಕಿ ಸಂಸ್ಥೆಗೆ 3.2 ಲಕ್ಷ ರೂ. ನಷ್ಟ ಉಂಟು ಮಾಡಿರು ವುದಾಗಿ ಮೆನೇಜರ್ ನಿಶಾಂತ್ ವಿ.ಎನ್. ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News