ನೂತನ ಶಾಲೆಯ ಉದ್ಘಾಟನೆಯ ಸಂದರ್ಭದಲ್ಲಿ ಜೈಲಿನಲ್ಲಿರುವ ಸಿಸೋಡಿಯಾರನ್ನು ನೆನದು ಕಣ್ಣೀರಿಟ್ಟ ಕೇಜ್ರಿವಾಲ್

Update: 2023-06-07 09:32 GMT

ಹೊಸದಿಲ್ಲಿ: ನಗರದಲ್ಲಿ ಹೊಸ ಶಾಲೆಯೊಂದರ ಉದ್ಘಾಟನೆಯ ಸಂದರ್ಭದಲ್ಲಿ ಜೈಲಿನಲ್ಲಿರುವ ತಮ್ಮ ಸಹೋದ್ಯೋಗಿ ಹಾಗೂ  ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ  ಅವರನ್ನು ನೆನಪಿಸಿಕೊಂಡ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕಣ್ಣೀರಿಟ್ಟರು.

ದಿಲ್ಲಿ ಮದ್ಯ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ  ಸಿಸೋಡಿಯಾ ಫೆಬ್ರವರಿಯಿಂದ ಜೈಲಿನಲ್ಲಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಕಣ್ಣಲ್ಲಿ ಉಕ್ಕಿಬಂದ ನೀರನ್ನು ಒರೆಸುತ್ತಾ, "ಮನೀಷ್ ಜಿ ಈ ಶಾಲೆಯನ್ನು ಆರಂಭಿಸಿದರು. ಪ್ರತಿ ಮಗುವೂ ಅತ್ಯುತ್ತಮ ಶಿಕ್ಷಣವನ್ನು ಪಡೆಯಬೇಕು ಎಂಬುದು ಅವರ ಕನಸಾಗಿತ್ತು. ಅವರು ಉತ್ತಮ ಶಾಲೆಗಳನ್ನು ನಿರ್ಮಿಸಿ ಮಕ್ಕಳಿಗೆ ಸರಿಯಾದ ಶಿಕ್ಷಣ.ಖಾತ್ರಿಪಡಿಸಿದ ಕಾರಣ ಅವರನ್ನು ಜೈಲಿಗೆ ಹಾಕಲಾಗಿದೆ’’ ಎಂದರು.

ಭಾರತೀಯ ಜನತಾ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ  ಕೇಜ್ರಿವಾಲ್ "ಈ ಜನರು ಶಿಕ್ಷಣದಲ್ಲಿ ದಿಲ್ಲಿಯ ಕ್ರಾಂತಿಯನ್ನು ಮುಗಿಸಲು ಬಯಸುತ್ತಾರೆ. ನಾವು ಅದನ್ನು ಮಾಡಲು ಬಿಡುವುದಿಲ್ಲ" ಎಂದು ಹೇಳಿದರು.

Similar News