ಪಠ್ಯ ಪರಿಷ್ಕರಣೆ ಬಗ್ಗೆ ಏಕಾಏಕಿ ನಿರ್ಧಾರ ಮಾಡಲ್ಲ: ಡಾ.ಜಿ.ಪರಮೇಶ್ವರ್

Update: 2023-06-07 12:57 GMT

ಕೊಲ್ಲೂರು, ಜೂ.7: ಪಠ್ಯ ಪರಿಷ್ಕರಣೆ ಕುರಿತು ಚರ್ಚೆ ಮಾಡಿ ಬಳಿಕ ನಿರ್ಧಾರ ತೆಗೆದುಕೊಳ್ಳುತ್ತೇವೆ. ಏಕಾಏಕಿ ಯಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಅವರಿವರು ಹೇಳಿಕೆ ಕೊಡುತ್ತಾರೆ ಎಂದ ಕ್ಷಣ ಅದೇ ಸರಕಾರದ ನಿರ್ಧಾರ ಎಂದು ಆಗುವುದಿಲ್ಲ ಎಂದು ರಾಜ್ಯ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ.

ಕೊಲ್ಲೂರಿನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ನಾವೆಲ್ಲರೂ ಕುಳಿತುಕೊಂಡು ಚರ್ಚೆ ಮಾಡಿ, ಯಾವುದು ಸರಿ ಎಂಬುದು ಆಗುತ್ತದೆಯೊ ಅದನ್ನೇ ಅನುಷ್ಠಾನಕ್ಕೆ ತರುತ್ತೇವೆ. ಪಠ್ಯಪರೀಕ್ಷಣೆ ವಿಚಾರದಲ್ಲಿ ಯಾವುದೇ ಗೊಂದಲ ಸೃಷ್ಟಿಸುವ ಕೆಲಸಕ್ಕೆ ನಾವು ಹೋಗುವುದಿಲ್ಲ ಎಂದರು.

ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ವಿಚಾರದ ಗೊಂದಲ ಕುರಿತು ಪ್ರತಿಕ್ರಿಯಿಸಿದ ಅವರು, ಜನರಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ. ಕೆಲವೊಂದಿಷ್ಟು ಜನ ಗೊಂದಲವನ್ನು ಸೃಷ್ಟಿ ಮಾಡುತ್ತಿದ್ದಾರೆ. ನಾವು ಯಾವ ರೀತಿ ಭರವಸೆ ನೀಡಿದ್ದೆವು ಅದೇ ರೀತಿಯಲ್ಲಿ ಅನುಷ್ಠಾನವನ್ನು ಕೂಡ ಮಾಡುತ್ತೇವೆ. ಅನುಷ್ಠಾನದ ವೇಳೆಯಲ್ಲಿ ಸಣ್ಣಪುಟ್ಟ ವಿಚಾರಗಳಿದ್ದರೆ ಅದನ್ನು ದೊಡ್ಡದು ಮಾಡುವಂತದ್ದು ಸರಿಯಲ್ಲ ಎಂದು ತಿಳಿಸಿದರು.

Similar News