ಪಿಟಿಸಿಲ್ ಭೂಮಿ ವಾಣಿಜ್ಯ ಭೂಪರಿವರ್ತನೆಗೆ ಆಗ್ರಹಿಸಿ ಗೃಹ ಸಚಿವರಿಗೆ ಮನವಿ

Update: 2023-06-07 14:49 GMT

ಉಡುಪಿ, ಜೂ.7: ಉಡುಪಿ ದಲಿತರ ಪ್ರಮುಖ ಸಮಸ್ಯೆಗಳಾದ ಪರಿಶಿಷ್ಟ ರಿಗೆ ಮಂಜೂರಾದ ಪಿಟಿಸಿಲ್ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಭೂಮಿ ಪರಿವರ್ತನೆ ಮಾಡಲು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಸಮಿತಿ ನಿಯೋಗ ಮಂಗಳವಾರ ಉಡುಪಿಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿತು.

ಪಿಟಿಸಿಲ್ ಭೂಮಿ ಪರಭಾರೆ ನಿಷೇಧ ಇರುವುದರಿಂದ ಮನೆ ಕಟ್ಟಲು ವಾಣಿಜ್ಯ ಬ್ಯಾಂಕ್‌ಗಳು ಸಾಲ ಕೊಡಲು ನಿರಾಕರಿಸುವ ಬಗ್ಗೆಯೂ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು. ಎಲ್ಲಾ ಪೋಲಿಸ್ ಠಾಣೆಗಳಲ್ಲಿ ಪರಿಶಿಷ್ಟ ದೌರ್ಜನ್ಯ ತಡೆ ಕಾಯಿದೆ ಅನ್ವಯ ಕೇಸು ದಾಖಲಾದಾಗ ಸ್ವತಃ ಠಾಣಾಧಿಕಾರಿ ಯವರೇ ಮುತುವರ್ಜಿ ವಹಿಸಿ ಠಾಣೆ ಯಿಂದಲೇ ಕೌಂಟರ್ ಕೇಸು ದಾಖಲಿಸುತ್ತಿರುವ ಬಗ್ಗೆಯು ಸಚಿವರೊಂದಿಗೆ ನಿಯೋಗ ಚರ್ಚಿಸಿ ಮನದಟ್ಟು ಮಾಡಿತು.

ನಿಯೋಗದಲ್ಲಿ ಸಮಿತಿಯ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರು,  ಜಿಲ್ಲಾ ಸಂಚಾಲಕರಾದ ಸುಂದರ ಮಾಸ್ಟರ್, ಶ್ಯಾಮರಾಜ್ ಬಿರ್ತಿ, ವಾಸುದೇವ ಮುಧೂರು, ವಿಶ್ವನಾಥ ಬೆಣ್ಣಂಪಳ್ಳಿ, ಪರಮೇಶ್ವರ ಉಪ್ಪೂರು, ರಮೇಶ್ ಕೆಳಾರ್ಕಳಬೆಟ್ಟು, ಆನಂದ ಬ್ರಹ್ಮಾವರ, ಜಿಲ್ಲಾ ಪದಾಧಿಕಾರಿಳಾದ ಸಂಜೀವ ಬಳ್ಕೂರು, ಸುರೇಶ ಹಕ್ಲಾಡಿ, ಮಂಜುನಾಥ ಬಾಳ್ಕುದ್ರು, ಅರುಣ್ ಪಾಡಿಗಾರ, ಶಿವಾನಂದ ಬಿರ್ತಿ ಉಪಸ್ಥಿತರಿದ್ದರು.

Similar News