ಕೊನೆಗೂ ಕೇರಳವನ್ನು ತಲುಪಿದ ನೈಋತ್ಯ ಮಾನ್ಸೂನ್
Update: 2023-06-08 10:23 GMT
ಹೊಸದಿಲ್ಲಿ: ಸಾಮಾನ್ಯಕ್ಕಿಂತ ಒಂದು ವಾರದ ನಂತರ ನೈಋತ್ಯ ಮಾನ್ಸೂನ್ ಗುರುವಾರ ಕೇರಳದ ರಾಜ್ಯವನ್ನು ಪ್ರವೇಶಿಸಿದೆ ಭಾರತೀಯ ಹವಾಮಾನ ಇಲಾಖೆ (IMD) ಪ್ರಕಟಿಸಿದೆ.
'ಬೈಪರ್ಜೋಯ್' ಚಂಡಮಾರುತವು ಮಾನ್ಸೂನ್ನ ತೀವ್ರತೆಯ ಮೇಲೆ ಪರಿಣಾಮ ಬೀರುತ್ತಿದೆ ಮತ್ತು ಕೇರಳದ ಮೇಲೆ ಅದರ ಆಕ್ರಮಣವು "ಸೌಮ್ಯ" ಆಗಿರುತ್ತದೆ ಎಂದು ಹವಾಮಾನಶಾಸ್ತ್ರಜ್ಞರು ಈ ಹಿಂದೆ ಹೇಳಿದ್ದಾರೆ.
"ನೈಋತ್ಯ ಮಾನ್ಸೂನ್ ಇಂದು ಜೂನ್ 8 ರಂದು ಕೇರಳದಲ್ಲಿ ಆರಂಭವಾಗಿದೆ" ಎಂದು ಭಾರತೀಯ ಹವಾಮಾನ ಇಲಾಖೆ (IMD ಹೇಳಿದೆ.
ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿ ಜೂನ್ 1 ರಂದು ಕೇರಳದಲ್ಲಿ ಆರಂಭವಾಗುತ್ತದೆ. ಮಾನ್ಸೂನ್ ಜೂನ್ 4 ರೊಳಗೆ ಕೇರಳಕ್ಕೆ ಆಗಮಿಸಬಹುದು ಎಂದು IMD ಮೇ ತಿಂಗಳಲ್ಲಿ ಹೇಳಿತ್ತು.