ಶಾಸಕ ಗುರ್ಮೆಯಿಂದ ರಾ.ಹೆದ್ದಾರಿ ಕಾಮಗಾರಿ ಪರಿಶೀಲನೆ

Update: 2023-06-09 13:42 GMT

ಉಡುಪಿ, ಜೂ.9: ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಶುಕ್ರವಾರ ಉಡುಪಿ-ಮಣಿಪಾಲ-ಪರ್ಕಳ-ಹಿರಿಯಡಕ-ಪೆರ್ಡೂರು ರಾಷ್ಟ್ರೀಯ ಹೆದ್ದಾರಿ 160ಎ ಇದರ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು.

ಮಳೆಗಾಲ ಸಮೀತಿಸುತ್ತಿರುವುದರಿಂದ ವಾಹನ ಸಂಚಾರಕ್ಕೆ ಸಮಸ್ಯೆ ಆಗದಂತೆ ಮತ್ತು ಸ್ಥಳೀಯರಿಗೆ ಸಮಸ್ಯೆ ಆಗದಂತೆ ಕಾಮಗಾರಿ ನಡೆಸಲು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಈ ಸಂದರ್ಭದಲ್ಲಿ ಬೊಮ್ಮರಬೆಟ್ಟು ಗ್ರಾಪಂ ಸದಸ್ಯ ಹರೀಶ್ ಸಾಲಿಯಾನ್, ಶಕ್ತಿ ಕೇಂದ್ರ ಅಧ್ಯಕ್ಷ ವಿನಯ ಪೂಜಾರಿ, ದಯಾನಂದ್ ಪೂಜಾರಿ, ಶೇಖರ್ ಶೆಟ್ಟಿ, ಬೂತ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ದಿನೇಶ್ ಮೆಂಡನ್, ಕೊಡ್ಲಾ ರೋಹಿತ್ ಶೆಟ್ಟಿ, ಬೆಳ್ಳಾರ್ಪಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.

Similar News