ಇನ್ನಂಜೆ: ಮತ್ಸ್ಯಗಂಧ ರೈಲಿಗೆ ನವಿಲು ಢಿಕ್ಕಿ; ಮುಂಭಾಗದ ಗಾಜಿಗೆ ಹಾನಿ

Update: 2023-06-10 14:49 GMT

ಉಡುಪಿ, ಜೂ.10: ಚಲಿಸುತ್ತಿದ್ದ ರೈಲಿಗೆ ನವಿಲು ಢಿಕ್ಕಿ ಹೊಡೆದ ಪರಿಣಾಮ ರೈಲಿನ ಗಾಜಿಗೆ ಹಾನಿಯಾಗಿರುವ ಘಟನೆ ಇನ್ನಂಜೆ-ಉಡುಪಿ ರೈಲ್ವೆ ಹಳಿಯ ಮಧ್ಯೆ ಶನಿವಾರ ಮಧ್ಯಾಹ್ನ 2.21ರಿಂದ 2.30ರ ನಡುವೆ ನಡೆದಿದೆ.

ಮಂಗಳೂರು ರೈಲ್ವೆ ಟರ್ಮಿನಲ್‌ನಿಂದ ಮುಂಬೈಗೆ ತೆರಳುತ್ತಿದ್ದ ಮತ್ಸ್ಯಗಂಧ ರೈಲಿನ ಮುಂಭಾಗದ ಗಾಜಿಗೆ ನವಿಲು ಬಡಿಯಿತ್ತೆನ್ನಲಾಗಿದೆ. ಇದರಿಂದ ರೈಲಿನ ಗಾಜಿಗೆ ಹಾನಿಯಾಗಿರುವುದಾಗಿ ತಿಳಿದುಬಂದಿದೆ.

ನಂತರ ಕುಂದಾಪುರ ರೈಲು ನಿಲ್ದಾಣದಲ್ಲಿ ಡೌನ್ ಟ್ರೈನ್ ನಿಝಾಮುದ್ದೀನ್ ಎರ್ನಾಕುಲಂ ಎಕ್ಸ್‌ಪ್ರೆಸ್‌ನ ಇಂಜಿನ್ ಬಳಸಿ ಮತ್ಸ್ಯಗಂಧ ರೈಲಿನ ಗಾಜನ್ನು ಬದಲಾಯಿಸಲಾಯಿತು ಎಂದು ಮಂಗಳೂರು ರೈಲ್ವೆ ವಿಭಾಗದ ಮೂಲಗಳು ತಿಳಿಸಿವೆ. ಇದರಿಂದ ಸುಮಾರು ಒಂದು ಗಂಟೆ 26 ನಿಮಿಷಗಳ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

Similar News