×
Ad

ಬಿಜೆಪಿ ಬಲಾತ್ಕಾರಿಗಳನ್ನು ಪೋಷಿಸುವ ಪಾರ್ಟಿಯೇ?: ಸಚಿವ ದಿನೇಶ್ ಗುಂಡೂರಾವ್

Update: 2024-05-05 19:56 IST

ಬೆಂಗಳೂರು : ಬಿಜೆಪಿ ಅಂದರೆ ಬಲಾತ್ಕಾರಿಗಳನ್ನು ಪೋಷಿಸುವ ಪಾರ್ಟಿಯೇ? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಜವಾಬ್ದಾರಿಯುತವಾಗಿ ನಡೆದುಕೊಂಡಿದೆ. ಮಹಿಳೆ ಅಪಹರಣ ಆರೋಪದಡಿಯಲ್ಲಿ ಎಸ್‍ಐಟಿ ಎಚ್.ಡಿ.ರೇವಣ್ಣ ಅವರನ್ನು ಬಂಧಿಸಿದೆ ಎಂದು ತಿಳಿಸಿದ್ದಾರೆ.

ಬ್ರಿಜ್‍ಭೂಷಣ್ ಹಾಗೂ ಉನ್ನಾವೋ, ಹತ್ರಾಸ್ ಪ್ರಕರಣಗಳಲ್ಲಿ ಅತ್ಯಾಚಾರಿಗಳನ್ನು ಬಂಧಿಸುವ ಧೈರ್ಯ, ದಿಟ್ಟ ಹೆಜ್ಜೆಯನ್ನು ಬಿಜೆಪಿ ಪ್ರದರ್ಶಿಸಲು ಸಾಧ್ಯವೇ? ಬಿಲ್ಕಿಸ್ ಬಾನು ಪ್ರಕರಣದಲ್ಲಿ ಗುಜರಾತ್ ಬಿಜೆಪಿ ಸರಕಾರ ಅಪರಾಧಿಗಳನ್ನ ಶಿಕ್ಷೆಯ ಅವಧಿಗೂ ಮುನ್ನವೇ ಬಿಡುಗಡೆ ಮಾಡಿತು. ಹಾಗಾದರೆ ಬಿಜೆಪಿಯ ನಿಲುವು ಏನು? ಬಿಜೆಪಿ ಅಂದರೆ ಬಲಾತ್ಕಾರಿಗಳನ್ನ ಪೋಷಿಸುವ ಪಾರ್ಟಿಯೇ? ಎಂದು ದಿನೇಶ್ ಗುಂಡೂರಾವ್ ಕಿಡಿಗಾರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News