ಬೀದರ್: ಕೆಎಸ್ಸಾರ್ಟಿಸಿಯಿಂದ ಆ.4ರಂದು ಫೋನ್ ಇನ್ ಕಾರ್ಯಕ್ರಮ
Update: 2025-07-29 14:39 IST
ಬೀದರ್: ಜಿಲ್ಲೆಯ ಸಾರ್ವಜನಿಕ, ಪ್ರಯಾಣಿಕರಿಗೆ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯದಲ್ಲಾಗುತ್ತಿರುವ ಸಮಸ್ಯೆಗಳು ಆಲಿಸಲು, ಪ್ರಯಾಣಿಕರಿಗೆ ಸಮರ್ಪಕ ಸಾರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಆ.4ರಂದು ಅಪರಾಹ್ನ 3:30ರಿಂದ 5:30ರವರೆಗೆ ಪೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬೀದರ್ ವಿಭಾಗದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಅಂದು ಸಾರ್ವಜನಿಕ ಪ್ರಯಾಣಿಕ, ಶಾಲಾ-ಕಾಲೇಜು ವಿದ್ಯಾರ್ಥಿಗಳು ದೂರವಾಣಿ ಸಂಖ್ಯೆ 77609 92200, 77609 92202ಗೆ ಕರೆ ಮಾಡಿ ಸಾರಿಗೆ ಸೌಲಭ್ಯದ ಬಗ್ಗೆ ಮನವಿ, ಸಮಸ್ಯೆ, ಮತ್ತು ಸಲಹೆಗಳು ಸಲ್ಲಿಸಬಹುದು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.