×
Ad

ಬೀದರ್ | ಸಂವಿಧಾನ ಜಾರಿಯಾದ ದಿನದ ಆಚರಣೆಗಾಗಿ ದಲಿತ ಸಂಘಟನೆಗಳ ಒಕ್ಕೂಟದಿಂದ ಸಭೆ

Update: 2025-01-14 21:08 IST

ಬೀದರ್ : ಸಂವಿಧಾನ ಜಾರಿಯಾದ ದಿನದ ಆಚರಣೆಗಾಗಿ ಇಂದು ನಗರದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ದಲಿತ ಮುಖಂಡ ಬಾಬುರಾವ್ ಪಾಸ್ವಾನ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಸಂಘಟನೆಯ ಸಂಚಾಲಕರು ಸೇರಿ ಒಂದೇ ವೇದಿಕೆಯಲ್ಲಿ ಕಾರ್ಯಕ್ರಮವನ್ನು ಮಾಡಲು ನಿರ್ಧರಿಸಿದರು. ಈ ಸಭೆಯಲ್ಲಿ ಎಲ್ಲರ ಸಹಮತದೊಂದಿಗೆ ಜ.26 ರಂದು ನಡೆಯಲಿರುವ ಕಾರ್ಯಕ್ರಮದ ಸಮಿತಿ ರಚನೆ ಮಾಡಲಾಯಿತು.

ಸಮಿತಿಯ ಗೌರವ ಅಧ್ಯಕ್ಷರಾಗಿ ಶಿವಕುಮಾರ್ ನೀಲಿಕಟ್ಟಿ ಸಮಿತಿಯ ಅಧ್ಯಕ್ಷರಾಗಿ ವಿಷ್ಣವರ್ಧನ್ ವಾಲ್ದೊಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ಪ್ರೇಮಕುಮಾರ್ ಕಾಂಬಳೆ, ಕಾರ್ಯದರ್ಶಿಯಾಗಿ ಅರುಣ ಪಟೇಲ್ ಅವರನ್ನು ನೇಮಿಸಲಾಯಿತು.

ಜ.26 ರಂದು ನಡೆಯಲಿರುವ ಸಂವಿಧಾನ ಜಾರಿಗೆ ಬಂದ ದಿನದ ಆಚರಣೆಯ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ವಿಚಾರವಾದಗಳನ್ನು ಕರೆತರಲು ನಿಶ್ಚಯ ಮಾಡಲಾಗಿದೆ. ಯಾರನ್ನು ಕರೆತರಬೇಕು ಎಂದು ಇನ್ನೊಂದು ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ದಲಿತ ಸಂಘಟನೆಯ ಮುಖಂಡರುಗಳಾದ ಅನೀಲಕುಮಾರ್ ಬೆಲ್ದಾರ, ರಮೇಶ್ ಡಾಕುಳಗಿ, ಮಾರುತಿ ಬೌದ್ದೆ, ಶ್ರೀಪತ್ರಾವ ದೀನೆ, ಉಮೇಶಕುಮಾರ್ ಸ್ವಾರಳ್ಳಿಕರ್, ಕಲ್ಯಾಣರಾವ ಭೋಸ್ಲೆ, ಅಂಬದಾಸ್ ಗಾಯಕವಾಡ್, ಪ್ರಕಾಶ್ ಮಾಳಗೆ, ರಮೇಶ್ ಕಟ್ಟಿ ತುಗಾಂವ್, ಸಂದೀಪ್ ಕಾಂಟೆ, ರಾಹುಲ್ ಡಾಂಗೆ, ರಾಜಕುಮಾರ್ ಗುನ್ನಳ್ಳಿ, ಸೂರ್ಯಕಾಂತ್ ಸಾಧುರೆ, ಪ್ರದೀಪ್ ನಾಟೆಕರ್, ರಮೇಶ್ ಪಾಸ್ವಾನ್, ಶಿವಕುಮಾರ್ ತುಂಗಾ, ಬಸವರಾಜ್ ಹೊಸಮನಿ, ಗೋಪಾಲ ದೊಡ್ಡಿ, ಗೌತಮ್ ಪ್ರಸಾದ್, ನರಸಿಂಗ್ ಸಾಮ್ರಾಟ್, ಅಂಬೇಡ್ಕರ್ ಬೌದ್ದೆ, ದಶರಥ್ ಹೊಸಮನಿ ಹಾಗೂ ದಲಿತ ಸಂಘಟನೆಯ ಎಲ್ಲ ಮುಖಂಡರು ಭಾಗಿಯಾಗಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News