×
Ad

ಬೀದರ್ | ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ

Update: 2025-06-05 18:01 IST

ಬೀದರ್ : ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಇಂದು ಭಾಲ್ಕಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಣೆ ಮಾಡಲಾಯಿತು.

ಈ ಸಮಯದಲ್ಲಿ ಪ್ರವೀಣ್ ಮೊರೆ ಅವರು ಮಾತನಾಡಿ, ಮರ ಬೆಳೆಸುವ ಮೂಲಕ ನಾಡು ಉಳಿಸಬೇಕಾಗಿದೆ. ಮರ ಬೆಳೆಸುವುದರಿಂದ ಪರಿಸರ ಮಾಲಿನ್ಯ ತಡೆಗಟ್ಟಬಹುದು. ಶುದ್ಧ ಗಾಳಿ, ಶುದ್ಧ ಜಲವಿದ್ದರೆ ಮಾತ್ರ ಮನುಷ್ಯ ಆರೋಗ್ಯವಂತನಾಗಿ ಬದುಕಬಹುದು ಎಂದು ಅವರು ಹೇಳಿದರು.

ಈ ಸಂಧರ್ಭದಲ್ಲಿ ಭಂತೆ ನೌಪಾಲ್ ಜಿ., ಪ್ರಮುಖರಾದ ಕೀರ್ತಿರತನ್ ಸೋನಾಳೆ, ಪ್ರದೀಪ್ ಭಾವಿಕಟ್ಟೆ, ತುಕಾರಾಮ್ ಕಾಸ್ಲೆ, ಆದೇಶ್ ಭಾವಿಕಟ್ಟೆ, ಸಂಗಮೇಶ್ ರೋಡ್ಡೆ, ಆಶೀಶ್ ಗುಪ್ತಾ, ಸುರೇಶ್ ಭಾವಿಕಟ್ಟೆ, ಸಿದ್ಧಾರ್ಥ ಬೇಂದ್ರೆ, ಸುನಿಲ್ ಸೂರ್ಯವಂಶಿ ಹಾಗೂ ಅಂಕುಶ್ ನಾಟೆಕಾರ್ ಸೇರಿದಂತೆ ಇತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News