ಎ.ವಾಮನ ಭಟ್
Update: 2026-02-26 18:22 IST
ಉಡುಪಿ: ಅಲೆವೂರಿನ ನೆಹರು ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಎ. ವಾಮನ ಭಟ್ (84) ಇಂದು ಬೆಳಿಗ್ಗೆ ನಿಧನ ಹೊಂದಿದರು.ಅವರು ಪುತ್ರ, ಪುತ್ರಿ, ಬಂಧುಬಳಗ ಹಾಗೂ ಅಪಾರ ಶಿಷ್ಯವೃಂದವನ್ನು ಅಗಲಿದ್ದಾರೆ.
ಅಲೆವೂರಿನ ಪ್ರತಿಷ್ಠಿತ ಪಟೇಲ್ ಮನೆತನದ ಹಿರಿಯ ಕೊಂಡಿಯಾಗಿದ್ದ ವಾಮನ್ ಭಟ್ ಅವರು ನೆಹರು ಪ್ರೌಢ ಶಾಲೆಯಲ್ಲಿ ಗಣಿತ ಶಿಕ್ಷಕರಾಗಿ ಹಾಗೂ ದಶಕಗಳ ಕಾಲ ಮುಖ್ಯೋಪಾಧ್ಯಾಯರಾಗಿ ಸುಮಾರು ಮೂರು ದಶಕ ಗಳಿಗೂ ಅಧಿಕ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು, ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಿದ್ದರು. ಅವರು ಅಲೆವೂರಿನ ಶ್ರೀವಿಷ್ಣುಮೂರ್ತಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತಸರರಾಗಿ ಸೇವೆ ಸಲ್ಲಿಸಿದ್ದರು.