ದುಬೈ: ಸಮಸ್ತ ಶತಾಬ್ಧಿ ಅಂತಾರಾಷ್ಟ್ರೀಯ ಪ್ರಚಾರ ಉದ್ಘಾಟನೆ
Update: 2025-11-07 00:16 IST
ದುಬೈ: ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾದ ಶತಮಾನೋತ್ಸವದ ಅಂತಾರಾಷ್ಟ್ರೀಯ ಪ್ರಚಾರದ ಉದ್ಘಾಟನೆಯು ದುಬೈನಲ್ಲಿ ನಡೆಯಿತು.
ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದ ಈ ಸಮ್ಮೇಳನದಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ಜಾಗತಿಕ ಸಭೆ, ಮಾಧ್ಯಮ ಸೆಮಿನಾರ್ ಮುಂತಾದ ಕಾರ್ಯಕ್ರಮಗಳು ಜರುಗಿತು. ಗಲ್ಫ್ ಸುಪ್ರಭಾತ ಡಿಜಿಟಲ್ ವಿಸ್ತರಣೆ, ಸುಪ್ರಭಾತ ಕನ್ನಡ ಆನ್ಲೈನ್ ಆವೃತ್ತಿ, ಎಸ್ಐಸಿ ಜಾಗತಿಕ ಸಮಿತಿ ಇತ್ಯಾದಿ ಬಗ್ಗೆ ಚರ್ಚೆ ನಡೆಸಲಾಯಿತು. ತಹಿಯ್ಯ ನಿಧಿಗೆ ಯುಎಇ ಸುನ್ನಿ ಕೌನ್ಸಿಲ್ ಕೊಡುಗೆ ಘೋಷಿಸಿತು.
ಸಮಸ್ತ ಅಧ್ಯಕ್ಷ ಸಯ್ಯಿದುಲ್ ಉಲಮಾ ಜಿಫ್ರಿ ತಂಳ್ ಉದ್ಘಾಟಿಸಿದ ಸಮ್ಮೇಳನದಲ್ಲಿ ಪಾಣಕ್ಕಾಡ್ ಸ್ವಾದಿಕಲಿ ಶಿಹಾಬ್ ತಂಳ್ ಅಧ್ಯಕ್ಷತೆ ವಹಿಸಿದರು. ಕರ್ನಾಟಕದಿಂದ ಕೇಂದ್ರ ಮುಶಾವರ ಸದಸ್ಯರಾದ ಬಂಬ್ರಾಣ ಉಸ್ತಾದ್, ತೋಡಾರು ಉಸ್ತಾದ್, ಕೊಡಗು ಅಬ್ದುಲ್ಲಾ ಫೈಝಿ ಉಸ್ತಾದ್ ಮತ್ತಿತರರು ಭಾಗವಹಿಸಿದರು.