×
Ad

ಮ್ಯಾನ್ಮಾರ್ ಗಣಿ ದುರಂತ: 25 ಮಂದಿ ಮೃತ್ಯು

Update: 2023-08-15 23:33 IST

ಯಾಂಗಾನ್: ಮ್ಯಾನ್ಮಾರ್ ನಲ್ಲಿ ಗಣಿ ದುರಂತದಲ್ಲಿ ಕನಿಷ್ಟ 25 ಮಂದಿ ಮೃತಪಟ್ಟಿದ್ದು ಇತರ 14 ಮಂದಿ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.

ಇತ್ತೀಚಿನ ದಿನದಲ್ಲಿ ಮ್ಯಾನ್ಮಾರ್ ನಲ್ಲಿ ಸುರಿದ ಭಾರೀ ಮಳೆ ಮತ್ತು ಪ್ರವಾಹದಿಂದ ಮಣ್ಣು ಸಡಿಲಗೊಂಡು ಹಲವೆಡೆ ಭೂಕುಸಿತ ಸಂಭವಿಸಿದೆ. ಉತ್ತರ ಕಚಿನ್ಸ್ ಪ್ರಾಂತದ ಗಣಿಯೊಂದರ ಆಳದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಸುಮಾರು 180 ಮೀಟರ್ ಎತ್ತರದ ಗೋಡೆ ಕುಸಿದುಬಿದ್ದಿದೆ.

ಹಲವು ಕಾರ್ಮಿಕರು ಮಣ್ಣಿನ ರಾಶಿಯಡಿ ಸಿಲುಕಿದ್ದು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ 25 ಮೃತದೇಹ ಪತ್ತೆಹಚ್ಚಲಾಗಿದೆ. ಇನ್ನೂ 14 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News