ಕುಕನೂರು | ಕೆಎಸ್ಸಾರ್ಟಿಸಿ ಬಸ್- ಟಿಪ್ಪರ್ ಢಿಕ್ಕಿ : ಬಸ್ ಕಂಡಕ್ಟರ್ ಮೃತ್ಯು
Update: 2025-08-20 19:14 IST
ಕುಕನೂರು : ಎಸ್ಸಾರ್ಟಿಸಿ ಬಸ್ ಮತ್ತು ಟಿಪ್ಪರ್ ನಡುವೆ ಅಪಘಾತ ಸಂಭವಿಸಿ ಕರ್ತವ್ಯ ನಿರತ ಬಸ್ ಕಂಡಕ್ಟರ್ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಹಳ್ಳಿ ಹತ್ತಿರ ನಡೆದಿದೆ.
ಮೃತರನ್ನು ತಾಲೂಕಿನ ಬಟಪನಹಳ್ಳಿ ಗ್ರಾಮದ ಕಂಡಕ್ಟರ್ ಉಮೇಶ್ ಹಾದಿಮನಿ ( 39) ಎಂದು ಗುರುತಿಸಲಾಗಿದೆ.
ಬಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.