×
Ad

ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ರನ್ನು 6 ದಿನ ಈಡಿ ಕಸ್ಟಡಿಗೊಪ್ಪಿಸಿದ ನ್ಯಾಯಾಲಯ

Update: 2024-03-22 20:52 IST

ಸಿಎಂ ಅರವಿಂದ್ ಕೇಜ್ರಿವಾಲ್ | Photo: PTI 

ಹೊಸದಿಲ್ಲಿ : ದಿಲ್ಲಿ ಮದ್ಯನೀತಿ ಪ್ರಕರಣದಲ್ಲಿ ರೋಸ್ ಅವೆನ್ಯೂ ನ್ಯಾಯಾಲಯ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು 6 ದಿನಗಳ ಕಾಲ ಜಾರಿ ನಿರ್ದೇಶನಾಲಯ (ಈಡಿ)ದ ಕಸ್ಟಡಿಗೊಪ್ಪಿಸಿದೆ. ಪ್ರಕರಣದಲ್ಲಿ ಕೇಜ್ರಿವಾಲ್‌ ರನ್ನು ಮುಖ್ಯ ಆರೋಪಿ ಎಂದು ವಾದಿಸಿದ ಈಡಿ ವರ ವಕೀಲರು, ಪ್ರಕರಣದ ವಿಚಾರಣೆಗಾಗಿ ಕೇಜ್ರಿವಾಲ್‌ ರನ್ನು ಈಡಿ ಕಸ್ಟಡಿಗೆ 10 ದಿನಗಳ ಕಾಲ ನೀಡುವಂತೆ ಕೋರಿದ್ದರು. 

ಮುಂದಿನ ವಿಚಾರಣೆಗಾಗಿ ಕೇಜ್ರಿವಾಲ್‌ ರನ್ನು ಮಾರ್ಚ್‌ 28 ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ ಎಂದು ತಿಳದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News