×
Ad

Fact Check: ಹಿಂದೂಗಳಿಗೆ ಮಕ್ಕಳಗಾದಂತೆ ಮುಸ್ಲಿಮರು ಮಾತ್ರೆಗಳನ್ನು ನೀಡುತ್ತಿದ್ದಾರೆ?, ವೈರಲ್ ವೀಡಿಯೊದ ಸತ್ಯ ಏನು?

ಮುಸ್ಲಿಮರು ಖರ್ಜೂರದಲ್ಲಿ ಬಂಜೆತನ ಮಾತ್ರೆಗಳನ್ನು ಬಚ್ಚಿಟ್ಟು ಹಿಂದೂಗಳಿಗೆ ನೀಡುತ್ತಿದ್ದಾರೆ ಎಂಬ ವೈರಲ್ ಮಾಹಿತಿ ಸುಳ್ಳು ಎಂದು ನಮ್ಮ ಸಂಶೋಧನೆಯಿಂದ ತಿಳಿದುಬಂದಿದೆ.

Update: 2025-02-11 17:30 IST

Claim: ಹಿಂದೂಗಳಿಗೆ ಮಕ್ಕಳಗಾದಂತೆ ಮುಸ್ಲಿಮರು ಖರ್ಜುರದಲ್ಲಿ ಮಾತ್ರೆಗಳನ್ನು ಬೆರೆಸಿ ನೀಡುತ್ತಿದ್ದಾರೆ.

Fact: ಹಕ್ಕು ಸುಳ್ಳು. ವೀಡಿಯೊದಲ್ಲಿರುವ ವ್ಯಕ್ತಿ ರೈಲು ಪ್ರಯಾಣಿಕರ ವಸ್ತುಗಳನ್ನು ಕದಿಯಲು ಮಾದಕ ದ್ರವ್ಯಗಳನ್ನು ಬಳಸುವ ಗ್ಯಾಂಗ್‌ನ ಭಾಗವಾಗಿದ್ದಾನೆ.

ಕೆಲವು ವರ್ಷಗಳ ಹಿಂದೆ, ಕೊಯಮತ್ತೂರಿನಲ್ಲಿ ಮುಸ್ಲಿಮರು ಬಿರಿಯಾನಿಯಲ್ಲಿ ಬಂಜೆತನಕ್ಕೆ ಕಾರಣವಾಗುವ ಮಾತ್ರೆಗಳನ್ನು ಬೆರೆಸಿ ಕೊಡುತ್ತಿದ್ದಾರೆ ಎಂಬ ಸುಳ್ಳು ವರದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿತ್ತು. ಆದರೆ, ಈ ಮಾಹಿತಿ ತಪ್ಪಾಗಿತ್ತು, ಅಂತಹ ಯಾವುದೇ ಮಾತ್ರೆ ಮಿಶ್ರಣ ಮಾಡಲಾಗಿಲ್ಲ ಎಂದು ಪೊಲೀಸರು ಖಚಿತ ಪಡಿಸಿದರು. ಇದೀಗ ಅಂತಹದೆ ಒಂದು ಹೇಳಿಕೆ ಕರ್ನಾಟಕದಲ್ಲಿ ಹರಿದಾಡುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು, ‘‘ಹಿಂದೂಗಳಿಗೆ ಮಕ್ಕಳು ಆಗದೆ ಇರೋ ಹಾಗೆ ಟ್ಯಾಬ್ಲೆಟ್ ಯಾವ್ ರೀತಿ ಹಾಕಿ ಖರ್ಜುರ ವ್ಯಾಪಾರ ಮಾಡ್ತಾರೆ, ಮತ್ತು ಮುಸ್ಲಿಮರಿಗೆ ಸಪರೇಟ್ ಆಗಿ ಇಟ್ಟಿರೋ ಖರ್ಜುರ ಮಾರ್ತಾರೆ. ಈಗಲಾದರೂ ಮುಸ್ಲಿಮರ ಹತ್ತಿರ ತರಕಾರಿ ಹಣ್ಣು ಬೇರೆ ಯಾವುದೇ ವಿಧ ವಾದ ವ್ಯಾಪಾರ ಮಾಡುವದನ್ನು ದಯವಿಟ್ಟು ನಿಲ್ಲಿಸಿ’’ ಎಂಬ ಸಂದೇಶದೊಂದಿಗೆ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ( ಆರ್ಕೈವ್ )

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಈ ಮಾಹಿತಿಯು ಸುಳ್ಳು ಎಂದು ಮತ್ತು ವೀಡಿಯೊದಲ್ಲಿರುವ ವ್ಯಕ್ತಿ ರೈಲು ಪ್ರಯಾಣಿಕರ ವಸ್ತುಗಳ ಕದಿಯಲು ಮಾದಕ ದ್ರವ್ಯಗಳನ್ನು ಬಳಸುವ ಗ್ಯಾಂಗ್‌ನ ಭಾಗವಾಗಿದ್ದಾನೆ ಎಂದು ಕಂಡುಬಂದಿದೆ.

 ವೈರಲ್ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ವೀಡಿಯೊದ ನಿರ್ದಿಷ್ಟ ಭಾಗದಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ತಾಜಾ ಟಿವಿ ಜನವರಿ 13 ರಂದು ಅದೇ ವೈರಲ್ ವೀಡಿಯೊವನ್ನು ಹಂಚಿಕೊಂಡಿರುವುದು ಸಿಕ್ಕಿದೆ. ಇದರಲ್ಲಿ, "ರೈಲುಗಳಲ್ಲಿ ಮಾದಕ ದ್ರವ್ಯಗಳ ಗ್ಯಾಂಗ್‌ಗಳು ಖರ್ಜೂರಕ್ಕೆ ಮಾದಕ ದ್ರವ್ಯಗಳನ್ನು ಬೆರೆಸಿ ಪ್ರಯಾಣಿಕರನ್ನು ದರೋಡೆ ಮಾಡುವ ವಿಶಿಷ್ಟ ವಿಧಾನವನ್ನು ಅನುಸರಿಸುತ್ತಿವೆ." "ರೈಲ್ವೆ ರಕ್ಷಣಾ ಪಡೆ ಅವರನ್ನು ಹೌರಾ ರೈಲು ನಿಲ್ದಾಣದಲ್ಲಿ ಬಂಧಿಸಿತು" ಎಂದು ಹೇಳಲಾಗಿದೆ. ಇದೇ ಸುದ್ದಿಯನ್ನು ಉರ್ದು ಮಾಧ್ಯಮ ಸಂಸ್ಥೆ ಮುನ್ಸಿಫ್ ಟಿವಿ ಇಂಡಿಯಾ ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪ್ರಕಟಿಸಿದೆ.

ಈ ಮಾಹಿತಿಯನ್ನು ಬಳಸಿಕೊಂಡು, ನಾವು ಹೌರಾ ರೈಲ್ವೆ ಪೊಲೀಸರ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಾಯಿಸಲಾದ ಎಫ್​ಐಆರ್ ಅನ್ನು ಹುಡುಕಿದೆವು. ಸ್ವೀಕರಿಸಿದ ಎಫ್‌ಐಆರ್ ಪ್ರಕಾರ, ಜನವರಿ 11, 2025 ರಂದು, ಹೌರಾ ರೈಲು ನಿಲ್ದಾಣದ ಹಳೆಯ ಆವರಣದಲ್ಲಿರುವ ಪ್ಲಾಟ್‌ಫಾರ್ಮ್ ಸಂಖ್ಯೆ 7 ರಲ್ಲಿ ಮೂವರು ದರೋಡೆಕೋರರ ಗುಂಪನ್ನು ಬಂಧಿಸಲಾಯಿತು. ಅವರು ಅಮಲೇರಿಸುವ ಮಾತ್ರೆಗಳನ್ನು (ಅಟಿವಾನ್ 2 ಎಂಜಿ) ಖರ್ಜೂರದೊಂದಿಗೆ ಬೆರೆಸಿ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ವಸ್ತುಗಳನ್ನು ದರೋಡೆ ಮಾಡುತ್ತಿದ್ದರು. ಎಫ್‌ಐಆರ್‌ನಲ್ಲಿ ಆರೋಪಿಗಳನ್ನು ಶಂಭು ಪಾಸ್ವಾನ್, ಗೋವಿಂದ್ ಕುಮಾರ್ ಮತ್ತು ಮೊಹಮ್ಮದ್ ಇರ್ಫಾನ್ ಎಂದು ಹೆಸರಿಸಲಾಗಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಳೆ ಮುಸ್ಲಿಮರು ಖರ್ಜೂರದಲ್ಲಿ ಬಂಜೆತನ ಮಾತ್ರೆಗಳನ್ನು ಬಚ್ಚಿಟ್ಟು ಹಿಂದೂಗಳಿಗೆ ನೀಡುತ್ತಿದ್ದಾರೆ ಎಂಬ ವೈರಲ್ ಮಾಹಿತಿ ಸುಳ್ಳು ಎಂದು ನಮ್ಮ ಸಂಶೋಧನೆಯಿಂದ ತಿಳಿದುಬಂದಿದೆ. ವಾಸ್ತವವಾಗಿ, ಅವರು ಮಾವಿನ ಹಣ್ಣಿನೊಳಗೆ ಮಾದಕ ದ್ರವ್ಯ ಮಾತ್ರೆಗಳನ್ನು ಅಡಗಿಸಿಟ್ಟು ರೈಲುಗಳಲ್ಲಿ ದರೋಡೆ ಮಾಡುವ ಗ್ಯಾಂಗ್ ಎಂದು ಪುರಾವೆಗಳೊಂದಿಗೆ ಸಾಬೀತುಪಡಿಸುತ್ತಿದ್ದೇವೆ.

 

Claim Review:ಹಿಂದೂಗಳಿಗೆ ಮಕ್ಕಳಗಾದಂತೆ ಮುಸ್ಲಿಮರು ಖರ್ಜುರದಲ್ಲಿ ಮಾತ್ರೆಗಳನ್ನು ಬೆರೆಸಿ ನೀಡುತ್ತಿದ್ದಾರೆ.

Claimed By:Facebook User

Claim Reviewed By:NewsMeter

Claim Source:Social Media

Claim Fact Check:False

Fact:ಹಕ್ಕು ಸುಳ್ಳು. ವೀಡಿಯೊದಲ್ಲಿರುವ ವ್ಯಕ್ತಿ ರೈಲು ಪ್ರಯಾಣಿಕರ ವಸ್ತುಗಳನ್ನು ಕದಿಯಲು ಮಾದಕ ದ್ರವ್ಯಗಳನ್ನು ಬಳಸುವ ಗ್ಯಾಂಗ್‌ನ ಭಾಗವಾಗಿದ್ದಾನೆ.

ಈ ಲೇಖನವನ್ನು ಮೊದಲು 'NewsMeter' ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್‌ʼನ ಭಾಗವಾಗಿ ವಾರ್ತಾ ಭಾರತಿ ಪ್ರಕಟಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - newsmeter.in

contributor

Similar News