ರೈತ ಶುಭಕರಣ್ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ, ಉದ್ಯೋಗ ಘೋಷಿಸಿದ ಭಗವಂತ ಮಾನ್
Update: 2024-02-23 20:52 IST
ಭಗವಂತ ಮಾನ್ | Photo: PTI
ಚಂಡಿಗಡ : ಪಂಜಾಬ್ ಸರಕಾರವು ಖನೌರಿ ಗಡಿಯಲ್ಲಿ ರೈತರ ಪ್ರತಿಭಟನೆ ವೇಳೆ ಹುತಾತ್ಮನಾಗಿರುವ ಶುಭಕರಣ ಸಿಂಗ್ ಕುಟುಂಬಕ್ಕೆ ಒಂದು ಕೋಟಿ ರೂ.ಗಳ ಆರ್ಥಿಕ ನೆರವನ್ನು ನೀಡಲಿದೆ ಮತ್ತು ಆತನ ತಂಗಿಗೆ ಸರಕಾರಿ ಉದ್ಯೋಗವನ್ನು ಒದಗಿಸಲಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಭಗವಂತ ಮಾನ್ ಅವರು ಶುಕ್ರವಾರ ಎಕ್ಸ್ ಪೋಸ್ಟ್ ನಲ್ಲಿ ಪ್ರಕಟಿಸಿದ್ದಾರೆ.