Raichur | ಅಂಬೇಡ್ಕರ್ ವೃತ್ತದಲ್ಲಿ ಛಲವಾದಿ ಮಹಾಸಭಾದಿಂದ ಪ್ರತಿಭಟನೆ
ಹಳೆಯ ಮೀಸಲಾತಿ ಮುಂದುವರಿಸಲು ಒತ್ತಾಯ
ರಾಯಚೂರು: ಕೆನೆ ಪದರದಂತೆ ಒಳ ಮೀಸಲಾತಿ ಜಾರಿಗೊಳಿಸಬೇಕು, ಗೊಂದಲ ಸರಿಪಡಿಸಬೇಕು ಎಂದು ಒತ್ತಾಯಿಸಿ ಛಲವಾದಿ ಮಹಾಸಭಾದ ಜಿಲ್ಲಾ ಸಮಿತಿಯ ಪಧಾದಿಕಾರಿಗಳು ನಗರದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಿವೃತ್ತ ನ್ಯಾಯಾಮೂರ್ತಿ ನಾಗಮೋಹನ್ ದಾಸ್ ರವರು ಸಿದ್ಧಪಡಿಸಿರುವ ಒಳ ಮೀಸಲಾತಿ ಸಮೀಕ್ಷೆ ವರದಿಯು ಅವೈಜ್ಞಾನಿಕತೆಯಿಂದ ಕೂಡಿದೆ. ಇದರಿಂದ ಮೂಲ ನಿವಾಸಿಗಳಾದ ಆದಿ ದ್ರಾವಿಡ, ಆದಿ ಕರ್ನಾಟಕ ಮತ್ತು ಆದಿ ಅಂದ್ರ ಪಂಗಡಗಳಿಗೆ ಸೇರಿದ ಬಲಗೈ 19 ಸಮುದಾಯಗಳಿಗೆ ಸಾಮಾಜಿಕ, ಶೈಕಣಿಕ ಮತ್ತು ಔದ್ಯೋಗಿಕವಾಗಿ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಈ ನಡುವೆ ಸರ್ಕಾರ ಮೀಸಲಾತಿ ಪ್ರಮಾಣವನ್ನು ಶೇ.56ಕ್ಕೆ ಹೆಚ್ಚಿಸಿರುವುದನ್ನು – ಪ್ರಶ್ನಿಸಿ, ಘನ ಉಚ್ಚ ನ್ಯಾಯಾಲಯವು ಸಂವಿಧಾನದ ಅನುಚ್ಛೇದದನ್ವಯ ಶೇ.50 ಭಾರದೆಂದು ತಡೆಯಾಜ್ಞೆ ನೀಡಲಾಗಿರುತ್ತದೆ ಎಂದು ಹೇಳಿದರು.
ಒಳಮೀಸಲಾತಿ ಪ್ರಕ್ರಿಯೆಗೆ ಸಂಬಂದಿಸಿದಂತೆ ಕಾನೂನು ರೂಪಿಸಿ ಜಾರಿಯಾಗುವವರೆಗೆ ಸರ್ಕಾರದ ಯಾವುದೇ ಇಲಾಖೆ, ಸಂಸ್ಥೆಗಳು ಹಾಗೂ ಶೈಕ್ಷಣಿಕ ವಿಶ್ವವಿದ್ಯಾಲಯಗಳಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯಲು ಕ್ರಮವಹಿಸುವುದು ಮತ್ತು ಒಳ ಮೀಸಲಾತಿ ಗೊಂದಲಗಳು ಪರಿಷ್ಕರಿಸುವ ತನಕ ಈ ಹಿಂದಿನಂತೆ ಮೀಸಲಾತಿ ನಿಯಮ 33 ರಂತೆ ರೋಸ್ಟರ್ ಬಿಂದು ನಿಯಮವನ್ನು ಅಳವಡಿಸಿಕೊಂಡು ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಛಲವಾದಿ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ವಿಶ್ವನಾಥ ಪಟ್ಟಿ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯ ಪ್ರಸಾದ ಪಿ., ಎಂ. ವಸಂತ, ವಕೀಲ ಹನುಮಂತಪ್ಪ, ಜಗನಾಥ, ವಕೀಲ ತಮ್ಮಣ್ಣ, ಶಿವುಕುಮಾರ, ಯಲ್ಲಪ್ಪ, ಪ್ರಕಾಶ, ಚಂದ್ರಶೇಕರ, ಸುರೇಶ ಪಟ್ಟಿ ಹಾಗೂ ಛಲವಾದಿ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.